00624. ಪೋಷಕ, ವಯಸ್ಕ, ಬಾಲಕ..
______________________________
(Picture source : http://www.drivertrainingassociates.com/src/images/xpac_head.jpg.pagespeed.ic.6hnfenWeOc.jpg)
ಇದು ಮನಃ ಸತ್ವಗಳ ಮಾತು
ಪಕ್ವಾಪಕ್ವ ಪ್ರಬುದ್ದ ಬಾಲಿಶ ನಡುವಳಿಕೆ
ವ್ಯಕ್ತಿತ್ವದ ವ್ಯವಹಾರದಲುಂಟಂತೆ ಮೊತ್ತ
ನಾವಾಡುವ ನಡೆನುಡಿ ಸಂಹಿತೆ ಸಮಸ್ತ..
ಏಯ್ ! ನೋಡಲ್ಲವನ ಕೀಟಲೆ ?
ಕೂರು ಬಾರೋ ತೆಪ್ಪಗೆ ಸುಮ್ಮನೆ ಮೂಲೆ
ಕೇಳಪ್ಪ ಹೇಳಿದ ಮಾತು ನಿನಗುತ್ತಮ
ಮಂದೆ ದಿನವೆಲ್ಲ ನುಡಿದಾ ಪೋಷಕ ಶಾಲೆ..
ಸರಿ ಸಮಾನ ಮನಸ್ಕ ಅನಿಸಿಕೆ ವಯಸ್ಕ
ಬಿಚ್ಚಿಟ್ಟರು ಮನದ ಮಾತು ತೆರೆಯದೆ ಪೂರ್ತ
ಗುಟ್ಟಿನ ಹನಿ, ಜುಟ್ಟಿನ ಬಣ್ಣ, ತುಟಿ ರಂಗು
ಅವನವಳಾ ಸಖ್ಯ ಪಿಸುಗುಟ್ಟುತ ರಹಸ್ಯ..
ನೋಡಿದೆಯ ಕರಗಿದರೆಲ್ಲಾ ಮುಖವಾಡ ?
ಕಾಣುವ ಹಸುಗೂಸು ಶಿಶು ಬಾಲಕ ಚೇಷ್ಟೆ !
ಛೇಢನೆ ಕೀಟಲೆ ನಗೆಯುಲ್ಲಾಸದ ವರ್ತನೆ
ತಂದಿಕ್ಕಿದೆ ಗಳಿಗೆ ಮದಿರೆಯಂತೆ ಹಸುಳೆಯ..
ತ್ರಿವೇಣಿ ಸಂಗಮ ಪ್ರತಿ ಮನಸಿನ ಸೂಕ್ತಿ
ಅನುಪಾತದಲದರನಾವರಣ ತಕ್ಕಂತೆ
ಸಾಕಾಗಿದೆ ವಯಸ್ಕ ಪೋಷಕ ನಿತ್ಯ ವೃತ್ತಿ
ಬಾಲಕನಾಗೆ ಮಡಿಲಾಸೆ ಹುಡುಕಿದೆ ಪ್ರವೃತ್ತಿ..
– ನಾಗೇಶ ಮೈಸೂರು
(೨೯.ಮಾರ್ಚ್.೨೦೧೬)
(ಸೂಚನೆ: ವ್ಯಕ್ತಿತ್ವ ವಿಕಸನ ತತ್ವದ ‘ಟ್ರಾನ್ಸ್ಯಾಕ್ಷನ್ ಅನಾಲಿಸಿಸ್’ನಲ್ಲಿ ಬರುವ ಪೇರೆಂಟ್, ಅಡಲ್ಟ್, ಚೈಲ್ಡ್ ಸೈದ್ದಾಂತಿಕ ಹಿನ್ನಲೆಯಲ್ಲಿ ಓದಿ. ಹೆಚ್ಚು ಆಸಕ್ತರಿಗೆ – ಎರಿಕ್ ಬರ್ನೆ ಯವರ ಸುಪ್ರಸಿದ್ದ ಪುಸ್ತಕ ‘ಗೇಮ್ಸ್ ಪೀಪಲ್ ಪ್ಲೇ’ – ಈ ಸಿದ್ದಾಂತದ ಬಗ್ಗೆ ಹೆಚ್ಚು ಬೆಳಕು ಬೀರುವ ಪುಸ್ತಕ )
(Picture source: https://madl.s3.amazonaws.com/images/p-a-c-wants.jpg)
Like this:
Like ಲೋಡ್ ಆಗುತ್ತಿದೆ...
Related
Published by
ನಾಗೇಶ ಮೈಸೂರು
ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ..
ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊
ಪ್ರೀತಿಯಿಂದ,
- ನಾಗೇಶ ಮೈಸೂರು
ನಾಗೇಶ ಮೈಸೂರು ಅವರ ಎಲ್ಲಾ ಲೇಖನಗಳನ್ನು ನೋಡಿ