00705. ಕಥಾಲೋಕ, ಚರಿತ್ರೆಯ ಪುಟ…
___________________________
(೦೧)
ಅದ್ಬುತ ಗೊತ್ತ !
ಅಲ್ಲಾವುದ್ದೀನ್ ದೀಪ
– ಹುಡುಕಿದ್ದೇನೆ.
(೦೨)
ಏಳು ಸಮುದ್ರ
ದಾಟಿ ಬಂದರು ಇಲ್ಲ
– ರಾಜಕುಮಾರಿ.
(೦೩)
ಕುದುರೆ ಏರಿ
ಕನಸಿಗೆ ಹೊಕ್ಕರು
– ನಂಬದ ಮನ.
(೦೪)
ಆಣೆ ಪ್ರಮಾಣ
ಮಾಡದ ಜಾಣತನ
– ಪ್ರಾಮಾಣಿಕತೆ.
(೦೫)
ಈಗಿಲ್ಲ ಪ್ರಶ್ನೆ
ಪ್ರೇಮಕ್ಕೂ ಪರ್ಮಿಟ್ಟೇನು?
– ಇಲ್ಲ ಲಿಮಿಟ್ಟು.
(೦೬)
ಅಂತಃಪುರದ
ಹೆಣ್ಣು ಮನ ಅತ್ತರು
– ವಾಸನೆಯಿಲ್ಲ.
(೦೭)
ದಂಡಿನ ಧಾಳಿ
ಗೆದ್ದಾ ಸಂಪತ್ತಿನಲಿ
– ಜನಾನ ಭರ್ತಿ.
(೦೮)
ಕಲಿಗಳವರು
ಕಲಿತ ವಿದ್ಯೆ ತೋರೆ
– ಮರೆತ ಮನೆ.
(೦೯)
ಶಹಜಾದೆಯ
ದಿನಕ್ಕೊಂದು ಕಥೆಗೆ
– ನಾ ಜಹಪಾನ.
(೧೦)
ನೀತಿ ಹೇಳುವ
ಈಸೋಪನ ಕಥೆಗೆ
– ಒಗ್ಗದ ಬಾಳು.
– ನಾಗೇಶ ಮೈಸೂರು
(Picture source: https://en.m.wikipedia.org/wiki/File:Prince_Salim_(the_future_Jahangir)_and_his_legendary_illicit_love.jpg)
Published by
ನಾಗೇಶ ಮೈಸೂರು
ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ..
ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊
ಪ್ರೀತಿಯಿಂದ,
- ನಾಗೇಶ ಮೈಸೂರು
ನಾಗೇಶ ಮೈಸೂರು ಅವರ ಎಲ್ಲಾ ಲೇಖನಗಳನ್ನು ನೋಡಿ
ನಂ ೧೬ ಸೊಗಸಾಗಿದೆ. ಜೋರಾಗಿ ನಗಿಸಿದಿರಲ್ಲಾ ಸ್ವಾಮಿ.
LikeLiked by 1 person
ನೋಡಿ ಅವರು ಅತ್ತರೂ ನಿಮಗೆ ನಗು !😊 thanks !
LikeLike
ಅದು ಹಾಗೆ, ಯಾರಾದರು ಬಿದ್ದದ್ದು ನೋಡಿದರೆ ಆ ಕ್ಷಣ ನಗುತ್ತೀವಲ್ಲ ಹಾಗೆ.
LikeLiked by 1 person
ರಾಮ ರಾಮ ! ಅತ್ತರೂ ನಗು, ಯಾರೊ ದೀಪ ಸಿಕ್ಕದೆ ನರಳಿದರೂ ನಗು.. ಸಾಲದ್ದಕ್ಕೆ ಬಿದ್ದುಬಿದ್ದೂ ಬೇರೆ. ಇನ್ನು ಬರೆದವರು ಬಿದ್ದಿಬಿದ್ದು ಅಳುವುದೊಂದೆ ಬಾಕಿ…! 😊
LikeLike
ಟಿವಿಯಲ್ಲಿ ತೋರಿಸ್ತಾರಲ್ಲ ಬರೀ ಬೀಳೋದು, ಜಾರೋದು ಆಗ ನೀವೇನು ಮಾಡ್ತೀರಾ ಹೇಳಿ!
LikeLiked by 1 person
ಅನ್ಕೊಂಡೆ .. ಈ ಹಾಳು ಲೈವ್ ಶೋಗಳದೆ ಪ್ರಭಾವ ಅಂತ 😊
LikeLike
ಹಾಗೇನಿಲ್ಲ, ನೋಡಿ ಹೀಗೆ ರಾತ್ರಿ ಜಾಗರಣೆಯಲ್ಲಿ just time pass
LikeLiked by 1 person
ಅದೇ ಕೇಳೋಣ ಅಂದುಕೊಂಡೆ – ಏನೋ ಬರೆಯುತ್ತಿದ್ದೀರಾ ಹೇಗೆ ?
LikeLike
ಇನ್ನೇನು ಮಾಡೋದು, ದೇವರು ನಿದ್ದೆಗೆ ಟೈಮಿಟ್ಟಿದ್ದಾನೆ. ಆದರೆ ಬರಹಕ್ಕೆ ಹೊತ್ತಿಲ್ಲ ಗೊತ್ತಿಲ್ಲ.. ಸರ್ ಒಂದು ಸಂತೋಷದ ವಿಷಯ guess
LikeLiked by 1 person
ಏನು ? ಮತ್ತಾವುದಾದರು ಪ್ರಕಟವಾಯ್ತಾ ? ಗೆಸ್ ಎಲ್ಲಾ ಬೇಡಿ ಹೇಳಿಬಿಡಿ.. ಖುಷಿ ಹಂಚಿಕೊಂಡಾಗಲೆ ಅದರ ‘ಖುಷಿ’ ಹೆಚ್ಚಾಗುವುದು..
LikeLike
Readoo kannada ಕ್ಕೆ “ನೆನಪಿನ ಬುತ್ತಿ ” select ಆಗಿದೆ☺
LikeLiked by 1 person
ಸೂಪರ್ ! ಅಭಿನಂದನೆಗಳು !! ಹೀಗೆ ಬರೆಯುತ್ತಿರಿ 😊
LikeLiked by 1 person
Thank you
LikeLiked by 1 person