01191. ರೀಡೂ ಕನ್ನಡದಲಿ ಕಗ್ಗ ೫೩ ರ ಟಿಪ್ಪಣಿ :
*ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೫೩*
*ಗುಣದ ಕಾರಣ ಮೂಲ, ವಿಸ್ಮಯದ ಸಂಕೀರ್ಣ ಜಾಲ..!*
ನಾವು ಹುಲ್ಲಿನ ಬಣ್ಣವನ್ನು ನೋಡಿದ ತಕ್ಷಣವೆ ಗ್ರಹಿಸಿಬಿಡುತ್ತೇವೆ – ಅದರ ಬಣ್ಣ ಹಸಿರು ಎಂದು. ಆದರೆ ಆ ಹುಲ್ಲಿಗೆ ಹಾಗೆ ಹಸಿರು ಬಣ್ಣ ಬಂದುದಾದರೂ ಎಲ್ಲಿಂದ ? ಅದೇನು, ಹುಲ್ಲಿಗೆ ನೀರು ಮತ್ತು ಲವಣ ಸತ್ವಗಳನ್ನು ಹೀರಲು ಮತ್ತು ತನ್ಮೂಲಕ ಬೆಳೆಯಲನುವು ಮಾಡಿಕೊಡುವ, ಕಂದು ಬಣ್ಣದ ಬೇರಿಂದ ಒದಗಿದ ಬಣ್ಣವೆ ? ಅಥವಾ ಅವನ್ನೆಲ್ಲ ಬೇರಿಗೆ ಸರಬರಾಜು ಮಾಡುವ ಮೂಲ ಹೊಣೆ ಹೊತ್ತ ಕೆಂಪು ಮಣ್ಣು, ತನ್ನಾಟದ ಮಾಯಾಜಾಲದಲ್ಲಿ ಅಂತಿಮವಾಗಿ ಹುಲ್ಲಿಗೆ ತೊಡಿಸಿದ ಹಸಿರಂಗಿಯೆ ? ಸೋಜಿಗವೆಂದರೆ ಬೇರಾಗಲಿ, ಮಣ್ಣಾಗಲಿ ಎರಡರಲ್ಲು ಹಸಿರು ಬಣ್ಣವೆ ಇಲ್ಲ ! ಆದರೆ ಅವೆರಡರ ಸಖ್ಯ ಮತ್ತು ಪೋಷಣೆಯಲ್ಲಿ ಚಿಗುರುವ ಹುಲ್ಲಿಗೆ ಮಾತ್ರ ಹಸಿರಿನ ದಟ್ಟ ಲೇಪನ..! ‘ಎಲ್ಲಿಂದ ತಂದು ಹಚ್ಚಿದವಪ್ಪಾ ಈ ಹಸಿರನ್ನು ?’ ಎಂದಿಲ್ಲಿ ವಿಸ್ಮಯಗೊಂಡಿದ್ದಾನೆ ಮಂಕುತಿಮ್ಮ.
ಪೂರ್ಣ ಲೇಖನವನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
– ನಾಗೇಶ್ ಎಮ್ ಎನ್
Like this:
Like ಲೋಡ್ ಆಗುತ್ತಿದೆ...
Related
Published by
ನಾಗೇಶ ಮೈಸೂರು
ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ..
ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊
ಪ್ರೀತಿಯಿಂದ,
- ನಾಗೇಶ ಮೈಸೂರು
ನಾಗೇಶ ಮೈಸೂರು ಅವರ ಎಲ್ಲಾ ಲೇಖನಗಳನ್ನು ನೋಡಿ