01742. ನಿಮಗೇನಾದರೂ ಗೊತ್ತಾ?
______________________________
ನನಗೇನು ಬೇಕಿದೆ ಅಂತ
ನಿಮಗೇನಾದರೂ ಗೊತ್ತಾ?
ಗೊತ್ತಾದರೆ ಹೇಳಿಬಿಡಿ ಸ್ವಾಮಿ
ಹಾಳು ಕೀಟ ದಿನನಿತ್ಯ ಕೊರೆತ ||
ಮೂರ್ಹೊತ್ತಿನ ಕೂಳ ಮಾತಲ್ಲ
ಮತ್ತೇನದೇನೇನೊ ಸಮಾಚಾರ
ಉಣ್ಣುಡುವುದಲ್ಲ ಸಣ್ಣ ವಿಷಯ
ದೊಡ್ಡದಿದೆ ಸರಿ ಗೊತ್ತಾಗುತ್ತಿಲ್ಲ ||
ಕೆಲಸವಿದೆ ಸಂಬಳ ಸಿಗುತಿದೆ
ಸಮಯವೆಲ್ಲ ಮುಗಿದಲ್ಲೆ ಚಿತ್ತ
ಹನಿಹನಿಗೂಡಿ ಹಳ್ಳವೆ ಹೊಂಡ
ಬೇಕೇನಿದೆ ಯಾಕೊ ಅರಿವಿಲ್ಲ ||
ಕಸುವೆಲ್ಲ ಅಲ್ಲಿ ತುಂಬಿಟ್ಟ ನೀರು
ತೋಳ ಕಸು ಬುದ್ಧಿಗೆ ತಕರಾರು
ತುತ್ತನ್ನಕಿಲ್ಲ ತತ್ವಾರ, ಮನಸಿಲ್ಲ
ಬಹುದು ಬಾರದು ಗೊಂದಲಕರ ||
ದಾಟಾಯ್ತು ಆ ದಿನಗಳ ಸಮರ
ಯಾಕೊ ಮುಂದಿದೆ ಖಾಲಿ ನೆಲ
ಅದೇ ಸಂಸಾರ ಮನೆ ಮಕ್ಕಳಾಟ
ಮನಕೇನೊ ಬೇಕಿದೆ ಗೊತ್ತಾಗುತ್ತಿಲ್ಲ ||
– ನಾಗೇಶ ಮೈಸೂರು
೨೮.೦೫.೨೦೧೮
(Picture source : https://goo.gl/images/tEU7KC)
Like this:
Like ಲೋಡ್ ಆಗುತ್ತಿದೆ...
Related
Published by
ನಾಗೇಶ ಮೈಸೂರು
ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ..
ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊
ಪ್ರೀತಿಯಿಂದ,
- ನಾಗೇಶ ಮೈಸೂರು
ನಾಗೇಶ ಮೈಸೂರು ಅವರ ಎಲ್ಲಾ ಲೇಖನಗಳನ್ನು ನೋಡಿ