01726. ಚುನಾವಣಾ ಪುರಾಣ..


01726. ಚುನಾವಣಾ ಪುರಾಣ..

___________________________

ನಮ್ಮ ಚುನಾವಣೆಗಳ ಜಾತಕ

ಬರೆವವನವ ಪ್ರಳಯಾಂತಕ

ಪಟ್ಟುಗಳೆಲ್ಲ ಕರತಲಾಮಲಕ

ಕೊನೆಗನಿಸಿದ್ದೆಲ್ಲ ತಳ್ಕಂಬಳಕ ! ||

ಜೋತಿಷಿ ಪಂಡಿತ ಲೆಕ್ಕಾಚಾರ

ಜಾತಿಮತಧರ್ಮ ಸಮಾಚಾರ

ಕೂಡು ಕಳಿ ಗುಣಿಸೂ ಭಾಗಿಸು

ಸಮೀಕ್ಷೆಯಲಿ ಭವಿತ ಊಹಿಸು ||

ಪ್ರಚಾರದಲೆಲ್ಲಾ ಕುಯುಕ್ತಿ ಪಟ್ಟು

ಆರೋಪ ದೂಷಣೆ ಗೆಲ್ಲಲೆ ಜುಟ್ಟು

ಯಾರ ಕಾಲ್ಯಾರೆಳೆದರೊ ಭರಾಟೆ

ವೇದಿಕೆ ಭಾಷಣ ಮಾತಲೆ ತರಾಟೆ ||

ಕೊನೆಗವನೇ ಮತದಾರ ಪ್ರಭುವೆ

ಮತ ಹಾಕುತ ದ್ವಂದ್ವಗಳ ನಡುವೆ

ಆಸೆ ಆಮಿಷ ನೈತಿಕಾನೈತಿಕ ಗುದ್ಧಿ

ಆ ಗಳಿಗೆಯಲಿ ತೋಚಿದಂತೆ ಬುದ್ಧಿ ||

ಮಾಡಲಿಲ್ಲವಲ್ಲ ಯಾರಿಗು ನಿರಾಶೆ

ಪೂರೈಸುತ ಅವರವರ ಅಭಿಲಾಷೆ

ಒಬ್ಬಗೆ ಬಹುಮತ ಮತ್ತೊಬ್ಬ ಮಂತ್ರಿ

ಮಗದೊಬ್ಬಗಾಯ್ತು ಅಧಿಕಾರ ಖಾತ್ರಿ ||

ವಿಶಾಲ ಹೃದಯಿ ಕನ್ನಡಿಗನೇ ಸಹೃದಯಿ

ಮೆಚ್ಚಿಸಿದನೆಲ್ಲರ ತಾನಾದರು ಬಡಪಾಯಿ

ಶುರು ಯಾದವೀ ಕಲಹ ಕಚ್ಚಾಟ ಹುಚ್ಚಾಟ

ಯಾರ ಗೆಲುವೊ ಕೊನೆಗೆ ಅತಂತ್ರ ಕೂಟ ||

ನೀತಿ ಅನೀತಿ ನೈತಿಕಾನೈತಿಕ ಹೋರಾಟ

ಬಲಾಬಲ ಚಪಲ ದೇಶೋನ್ನತಿ ಮಾತಾಟ

ಕಲಸುಮೇಲೋಗರ ಅಲ್ಲೋಲಾ ಕಲ್ಲೊಲ್ಲ

ಚಂಚಲತೆಯಲ್ಲೂ ಪ್ರಜಾಪ್ರಭುತ್ವ ಅಚಲ! ||

– ನಾಗೇಶ ಮೈಸೂರು

೧೬.೦೫.೨೦೧೮

(Picture source: internet / social media / news portals)

00806. ಬಾಳೆ ಹೊಂಬಾಳೆ


00806. ಬಾಳೆ ಹೊಂಬಾಳೆ
________________________

ಬಾಳು ಬಾಳೆಯ ಗಿಡದ ಹಾಗೆ – ನೆಟ್ಟ ನೇರವೂ ಹೌದು, ಹಗುರವೂ ಹೌದು, ಕತ್ತರಿಸಲು ಸುಲಭವೂ ಹೌದು, ಸಿಹಿಯೂ ಹೌದು, ಅಳಿಸಲಾಗದ ಕಲೆಯೂ ಹೌದು, ಉಣಿಸುವ ಬಾಳೆಲೆಯೂ ಹೌದು, ಆ ಎಲೆಯಷ್ಟೆ ನವಿರಾದ ಜತನವೂ ಹೌದು, ಕಲ್ಲು ಕರಗಿಸುವ ಸ್ಪರ್ಶಮಣಿಯೂ ಹೌದು. ಈ ಬಾಳಿನ ಹೊಂಬಾಳೆಯನ್ನು ಕಾಯಿಂದ ಮಾಗಿಸಿ ಹಣ್ಣಾಗಿಸುವ ಬದುಕಿನ ಚಿತ್ರ ಸೂಚಿ – ಈ ತ್ರಿವಳಿ ಕವನ. ಬಾಳೆ ಎಂದು ಓದುವಾಗ ಬಾಳೆಹಣ್ಣಿನ ಚಿತ್ರಣವನ್ನು ಮನದಲಿಟ್ಟುಕೊಂಡಂತೆ ಬಾಳು, ಜೀವನ ಎನ್ನುವ ಅರ್ಥವನ್ನು ಆರೋಪಿಸಿಕೊಂಡಾಗ ವಿಭಿನ್ನ ಅರ್ಥವೂ ಹೋರಾಡುತ್ತದೆ – ಕೆಲವು ಸಾಲುಗಳಲ್ಲಿ. ಬಾಳೆ ಹಣ್ಣಾಗಬೇಕು ಎನ್ನುವಾಗ ತಿನ್ನಲು ರುಚಿಯಿರಬೇಕಾದರೆ ಹಣ್ಣಾಗಿರಬೇಕು ಎನ್ನುವ ಅರ್ಥ ಹೊರಟಂತೆ, ಬದುಕಿದ್ದು ಸಾರ್ಥಕವಾಗಲು ಬಾಳು ಪಕ್ವವಾಗಬೇಕು, ಪ್ರಬುದ್ಧವಾಗಬೇಕು ಎನ್ನುವ ಅರ್ಥವೂ ಹೌದು; ನಮ್ಮ ಬಾಳೆ ಪ್ರಬುದ್ದತೆಯಲ್ಲಿ ಸಾಗಿ ಮಾಗಿ ಹಣ್ಣಾಗಬೇಕೆಂಬ ಆಶಯವೂ ಹೌದು. ಅದೆಲ್ಲ ಬಿಟ್ಟು ಬಾಳೆಗಿಡ, ಹಣ್ಣು, ಎಲೆಗಳ ಕುರಿತಾದ ಮಕ್ಕಳ ಪದ್ಯವೆಂದುಕೊಂಡರೂ ಸರಿಯೇ 😊


ಎಳೆತನ ಕಾಯ (ಬಾಳೆ ಹೊಂಬಾಳೆ – 01)
___________________________________

ಬಾಳೇ ಎಳೆ
ಎಳಸು ಬಾಳೆಲೆ
ತೆಳುವಾದ ಹಾಳೆ
ಜತನ ಕಾದರೆ ಬಾಲೆ
ಎಳೆಳೆಯಾಗಿ ತೆರೆಯುವಳೆ..!

ಎಳೆತನ ಕಾಯ
ಜಾರಿಸುವಪಾಯ
ಗಾಳಿಗ್ಹರಿವ ಸಮಯ
ಕಾಯುತ್ತಲೆ ಸರಿ ಪ್ರಾಯ
ಸುತ್ತಿ ಮುಚ್ಚಿಡಲು ಉಪಾಯ..!

ಎಲೆಯ ಸಾರ
ದೋಣಿಯಾಕಾರ
ಸಿಗಿದು ಬೆನ್ನ್ಮೂಳೆ ತರ
ಕತ್ತರಿಸಿ ಮೂರಾಗುವ ಪೂರ
ಎಲೆಯಿಡೆ ಮೂರಾಳಿಗೆ ಆಹಾರ..!

ಬಾಳೇ ಗಿಡ
ನಿಂತಾಗ ನೋಡ
ಕಲಿಯುತ ಗಾಢ
ಸೆಟೆದು ನಡೆವ ಜಡ
ಕಲಿತೆ ಬೆಳೆ ಬಾಳ ನಿಗೂಢ..!

ಗಿಡವಾಗಿ ಬಗ್ಗೆ
ಎಳೆ ಕಂದು ಕುಗ್ಗೆ
ಅಡಿಪಾಯದ ಮೊಗ್ಗೆ
ಮೈ ಮರೆತು ನುಗ್ಗಿ ನಗ್ಗೆ
ಜೀವಮಾನ ನೋವಿನ ಬುಗ್ಗೆ..!

——————————————————————-
ನಾಗೇಶ ಮೈಸೂರು
——————————————————————-

ಬಾಳೇ ಕರ್ಮಕಾಂಡ (ಬಾಳೆ ಹೊಂಬಾಳೆ – 02)
_____________________________________

ಬಾಳೇ ಕಾಂಡ
ಪದರದ ಅಂಡ
ಸಿಪ್ಪೆ ಸುಲಿಸಬೇಡ
ನಿಲುವ ಶಕ್ತಿಯ ದಂಡ
ಸುತ್ತಿಸುತ್ತಿಸಿಟ್ಟ ಪ್ರಕಾಂಡ..!

ಕರ್ಮಕಾಂಡ
ಹೋರಾಟ ನಿಭಿಢ
ಒಳಾಂಗಣ ನಿಗೂಢ
ಸವರೆ ಕತ್ತಿಯ ಜಾಡ
ತರಿದ ಶಕ್ತಿಯ ನೋಡಾ..!

ಬಾಳೇ ಕಂದು
ಕಂದಿಸದ ಬಂಧು
ಮಾಗಿದ ವಯಸೆಂದು
ಅನುಭವ ಅನುಭಾವಿಸದು
ಸಮ್ಮಿಶ್ರಣ ಯೌವ್ವನ ಸರಿದು..!

ಕಂದದೆ ತುಸು
ಕುಂದ ಸಾವಾರಿಸು
ಹಗಲಿರುಳಿನ ಕೂಸು
ಎದೆಗುಂದದೆ ಮುನ್ನಡೆಸು
ಬಿಡುವಿರೆ ನಡುವೆ ತೂಕಡಿಸು..!

————————————————————
ನಾಗೇಶ ಮೈಸೂರು
————————————————————

ಬಾಳೇ ಹಣ್ಣು (ಬಾಳೆ ಹೊಂಬಾಳೆ – 03)
_____________________________________

ಬಾಳೇ ಹಣ್ಣು
ನೀ ಸಾರ್ಥಕವೆನ್ನು
ಧನ್ಯತೆ ಸೇರಿದರಿನ್ನು
ಪೂಜಿಸಿ ತಿನ್ನೋ ತಾನು
ರುಚಿ ಪೋಷಣೆ ಕಾನೂನು..!

ಹಣ್ಣಿನ ರೀತಿ
ಜಗವಿರೆ ಪ್ರೀತಿ
ಸಿಪ್ಪೆ ಸುಲಿದ ನೀತಿ
ಅಡಗಿ ವಿಸ್ಮಯ ಪ್ರಕೃತಿ
ಹೆಣ್ಣಾದರೆ ಹಣ್ಣೆ ಜಾಗೃತಿ…!

ಬಾಳೇ ದಿಂಡು
ಅಂತರಂಗ ತಂಡು
ಜತನದಿ ಒಳಗಿಟ್ಟ ಕಡು
ಸ್ವಾಸ್ತ್ಯದ ಗುಟ್ಟಿನ ಕರಡು
ಬಲ್ಲಿದರಷ್ಟೇ ಬಲ್ಲ ತೆಳುತುಂಡು..!

ಬಿಚ್ಚೆ ಕಾಂಡ
ಪದರ ದಪ್ಪ ಗಿಡ
ಹೊಕ್ಕಂತೆ ಒಳ ನಾಡ
ತೆಳುವಾಗೊ ಬಾಳೇಪತ್ರ ಕೊಡ
ಅಪರೂಪದ ತರಕಾರಿ ತಿಂದುಬಿಡ..!

————————————————————
ನಾಗೇಶ ಮೈಸೂರು
————————————————————

ಬಾಳೇ = Banana Fruit , ಲೈಫ್

00649. ಸೆಲ್ಪೀಪುರಾಣಾ !


00649. ಸೆಲ್ಪೀಪುರಾಣಾ !
________________________

  

(Picture source: https://www.hastac.org/blogs/lstrombergsson/2015/11/03/vandyvienna2015-using-instagram-selfie-critical-lens-and-identity)

ಹೋದ್ಯಾ ಪುಟ್ಟಾ ? ಬಂದ್ಯಾ ಪುಟ್ಟ ?
ಮೇಲ್ಹತ್ತಿದ್ರೇನು ನಮ್ಮನೇದೆ ಅಟ್ಟ
ಹಂಗೆ ತೆಗ್ದೆ ತಾನೇ ಸೆಲ್ಪೀ ಮೊಬೈಲು ?
ಬೆಳಗಿನ್ಹೊತ್ತಲಿ ಕೂತ್ ಕೆರೆ ಗದ್ದೇ ಬಯಲು !

ರೀಲ್ ಹಾಕಂಗಿಲ್ಲ ಪ್ರಿಂಟ್ ಮಾಡಂಗಿಲ್ಲ
ಸರಿ ಕ್ಯಾಮರ ಇದೆಯಾ ಕೇರ್ ಮಾಡಂಗಿಲ್ಲ
ಆರ್ಕಾಸಿನ ಮೊಬೈಲ್ಗೂ ಕ್ಯಾಮರ ಕಣ್ಣು
ತಗಿ ಕೂತ್ಕಡೆ ನಿಂತ್ಕಡೆ ವಯ್ಯಾರದ ಹೆಣ್ಣು !

ತೆಗೆದಿದ್ ಗಳಿಗೆಲೆ ಅಪ್ಲೋಡು ಜಗಕೆಲ್ಲ
ಲೈಕು ಕಾಮೆಂಟು ಹಿಂಡಿಂಡೆ ಬಂದ್ವಲ್ಲ
ರಾಶಿ ರಾಶಿ ಲೈಕು ಮುಖ ನೋಡ್ದೆಲೆ ಹಾಕು
ಬಾಣಲೆ ತುಂಬಾ ತುಂಬ್ಕೊಂಡರೆ ಸಾಕು !

ಗುಂಪ್ಗುಂಪಾಗಿ ಸೇರೋ ಸಮೂಹ ಸನ್ನಿ
ಹೊಡೆದಿದ್ದೆ ಸೆಲ್ಪಿ ಎಷ್ಟೊಂದ್ ಜನ ನನ್ನೀ
ಬದುಕೋದೇ ಸ್ಟೈಲು ಸೆಲ್ಪೀ ತರ ಡೌಲು
ಇರಲಪ್ಪ ಸ್ವಲ್ಪ ಭೂಮಿ ಮೇಲ್ ಕಾಲು !

ಪರ್ಸ್ನಲ್ಲು ಫೋಟೊ ಪ್ರೈವೇಟಾಗಿಟ್ಟಿರು
ಸಿಕ್ಸಿಕ್ದಂಗೆಲ್ಲ ಹಾಕ್ಕೊಬಾರ್ದು ಮ್ಯಾಟರು
ಗೊತ್ತಿಲ್ದಿರೊ ಮಂದಿ ಕೈಗ್ಹಾಕದೆ ನಮ್ಮನ್ನೇ
ಸೆಲ್ಪಿ ತೊಗೊ ಸೇಫಾಗಿ ಕತ್ತಿಗ್ ಬರ್ದಂಗೆ !

– ನಾಗೇಶ ಮೈಸೂರು

00507. ಅಲ್ಲೊಂದು ಇಲ್ಲೊಂದು ಹೀಗೆ ಸ್ಮರಿಸೋಣ… (ಮಕ್ಕಳಿಗೆ)


00507. ಅಲ್ಲೊಂದು ಇಲ್ಲೊಂದು ಹೀಗೆ ಸ್ಮರಿಸೋಣ…(ಮಕ್ಕಳಿಗೆ)
______________________________________________

ಮಹಾ ಪುರಾಣಗಳಿಂದ ಪುನೀತವಾದ ನಮ್ಮ ಪರಂಪರೆಯಲ್ಲಿ, ಆ ಪುರಾಣದ ಅಸಂಖ್ಯಾತ ಪಾತ್ರಗಳು ಅದೆಷ್ಟು ಹಾಸುಹೊಕ್ಕಿವೆಯೆಂದರೆ, ನಮಗರಿವಿಲ್ಲದೆಯೆ ನಮ್ಮೆಷ್ಟೊ ನಡೆ,ನುಡಿ,ಆಚಾರಗಳು ಅದೆ ಆದರ್ಶವನ್ನು ಪ್ರತಿಪಾದಿಸುತ ನಡೆದಿರುತ್ತವೆ. ಅದರಲ್ಲೂ, ಪುರಾಣದ ವನಿತೆಯರ, ಮಹಾಸತಿಯರ ಉದಾಹರಣೆಗಳಂತೂ ಲೆಕ್ಕವಿಲ್ಲದಷ್ಟು. ಅಂಥಹ ಕೆಲವು ಪುರಾಣದ ವ್ಯಕ್ತಿತ್ವಗಳ ನೆನಕೆಯೆ ಈ ಕವನ. ಪ್ರಾಸಾಂಗಿಕವಾಗಿ ಒಂದೆರಡು ಗಂಡುಗಳ ಹೆಸರೂ ಬರುವುದಾದರು, ಮುಖ್ಯ ಭೂಮಿಕೆ ಆ ಮಹಾಸತಿಯರದೆ!  

 (Picture source from: https://commons.m.wikimedia.org/wiki/File:Anasuya_feeding_the_Hindu_Trinity,_The_Krishna-Sudama_Temple_of_Porbandar,_India.JPG)

ಭಕ್ತ ಮಾರ್ಕಂಡೇಯ, ಭೇಷ್! ಯಮನನ್ನೇ ಗೆದ್ದ
ಭಕ್ತಿಯಲೇ ಸೋಲಿಸಿ, ಮಾಡದಲೆ ಯುದ್ಧ!
ಈಕೆ ಸತಿ ಸಾವಿತ್ರಿ, ಸತ್ಯವಾನನ ಮೇಸ್ತ್ರಿ
ಏಮಾರಿಸಿ ಯಮನ, ಮೂರು ವರ ಪಡೆದಳಾ ಪುತ್ರಿ ||

ಇನ್ನು ಸತಿ ಅನಸೂಯಾ, ಬಿಡಿ ಯಾಕೆ ಅಸೂಯ
ದತ್ತಾತ್ರೇಯನ ಹಡೆದೆ, ಆಡಿದಾ ಲೀಲೆಯ
ಯಾರಿಗುಂಟು ಭಾಗ್ಯ ಒಂದೇ ಬ್ರಹ್ಮಾದಿ ಹರಿಹರ
ಮಕ್ಕಳಾದರವರೆ ಬ್ರಹ್ಮ, ವಿಷ್ಣು, ಮಹೇಶ್ವರ ||

ಪಾಪದ ಚಿಕ್ಕವಳ್ಹುಡುಗಿ, ಸತಿ ಸುಕನ್ಯ
ಕುರುಡಾಗಿ ಪತಿ ದೇವ, ಮುದಿ ಚೌವ್ವನನ
ಒಲಿಸಲಿಲ್ಲವೇ ಕಡೆಗೂ ಅಶ್ವಿನಿ ಕುಮಾರನ
ಪತಿಗೆ ಹಿಂತಿರುಗಿಸಿ ಮತ್ತೆ ಗರಿಗರಿ ಯೌವ್ವನ ||

ರೇಣುಕಾದೇವಿ ಕಥೆ, ಕಾಡಿತ್ತು ಚಂಚಲತೆ
ಜಮದಗ್ನಿ ದಾರುಣತೆ, ತಪ್ಪೇನಿತ್ತೆ ವನಿತೆ?
ಬಿಡದೆ ಕೊಚ್ಚಿದ ಪುತ್ರ ಪರಶುರಾಮನ ಘನತೆ
ಮತ್ತೆ ಬೇಡಲು ಪಿತನ ಬದುಕಿದಳು ಮಾತೆ ||

ಗೌತಮನ ಅಹಲ್ಯೆ, ಮೋಸ ಹೋದವಳಲ್ಲೆ
ಇಂದ್ರ ಚಪಲಕೆ ಸಿಕ್ಕಿ ಶಿಲೆಯಾದ ಮಹಿಳೆ
ಸಾವಿರ ಕಣ್ಣಿನ ಶಾಪ ದೇವರಾಜನ ಪಾಲೆ
ಕಾಯಬೇಕಾಯಿತೆ ಅಬಲೆ, ಶ್ರೀ ರಾಮನ ಕಾಲೇ ||

ಹುಡುಕುತ್ತ ಹೋದರೆ ಹೀಗೆ ನಮ್ಮ ಪುರಾಣ
ಹೇಳಿ ಮುಗಿಯದ ಮಹಿಮೆ ಹೇಳ್ಹೇಳಿ ನಿತ್ರಾಣ
ಅಲ್ಲೊಂದು, ಇಲ್ಲೊಂದು ಹೀಗೆ ಹುಡುಕೋಣ
ಆಗೊಮ್ಮೆ, ಹೀಗೊಮ್ಮೆ ಕುಳಿತು ಸ್ಮರಿಸೋಣ ||

– ನಾಗೇಶ ಮೈಸೂರು

00500. ಹೇಗಿದ್ದಾರೋ ಹಾಗೆ …! (ವಯಸೆ ಆಗದ ದೇವರುಗಳು) (ಮಕ್ಕಳಿಗೆ)


00500. ಹೇಗಿದ್ದಾರೋ ಹಾಗೆ …! (ವಯಸೆ ಆಗದ ದೇವರುಗಳು) (ಮಕ್ಕಳಿಗೆ)
______________________________________________

ದೇವರುಗಳಲ್ಲಿ ನಂಬಿಕೆಯಿರುವ ನಾವೆಲ್ಲ ದೇವರನ್ನು ಕಂಡಿರುವುದು ಫೋಟೊಗಳ ಮೂಲಕ, ದೇವಾಲಯದ ಮೂರ್ತಿಗಳಿಂದ, ಚಿತ್ರಕಲೆಯ ಮೂಲಕ ; ಅದು ಬಿಟ್ಟರೆ ಚಲನ ಚಿತ್ರಗಳ ವೇಷ ಭೂಷಣಗಳ ಮುಖಾಂತರ. ಹೀಗೆ ಎಲ್ಲೆ ನೋಡಿರಲಿ, ಯಾರೆ ನೋಡಿರಲಿ – ನಮ್ಮ ತಾತ, ಮುತ್ತಾತ, ಮುತ್ತಜ್ಜರುಗಳಿಂದ ಹಿಡಿದು ನಮ್ಮ ಮಕ್ಕಳು ಮರಿಗಳ ತನಕ – ಈ ದೇವರುಗಳು ಮಾತ್ರ ಹಾಗೆ ಒಂದೆ ತರಹ ಕಾಣುತ್ತಾರೆ. ವಯಸ್ಸಾಗದ ಅದೆ ಯುವ ಮುಖ, ಕಳೆ ಇತ್ಯಾದಿಗಳು ಅವರ ಅಮೃತ ಸಿದ್ದಿ ಅಮರತ್ವದೊಂದಿಗೆ ಬೆರೆತು ಅವರ ಕುರಿತ ವಿಶಿಷ್ಟ ಕಲ್ಪನೆಗಳಿಗೆ ಮತ್ತಷ್ಟು ನೀರೆರೆದು ಪೋಷಿಸಿ, ಅವರನ್ನು ನಮ್ಮ ದೃಷ್ಟಿಗಳಲ್ಲಿ ಮತ್ತಷ್ಟು ವೈಶಿಷ್ಠ್ಯಪೂರ್ಣರೆನಿಸಿಬಿಡುತ್ತವೆ. ಆ ಭಾವದ ಸಾರಾಸಗಟಿನ ಚಿತ್ರಣ ಈ ಕವನ.

  
(Photo source, wikipedia : https://en.m.wikipedia.org/wiki/File:Hindu_deities_montage.png)

ತಾತ ಮುತ್ತಾತನ ಕಾಲದಿಂದಲೂ
ಹೇಗಿದ್ದಾರೋ ಹಾಗೆ ಇರುವರು
ಕೊಂಚವೂ ಕೂಡ ಕೊಂಕಿದಂತಿಲ್ಲ
ವಯಸೆ ಆಗದೆ ನಿಂತಿಹರಲ್ಲ ||

ದೇಗುಲಗಳಲಿ ಬಾಗಿಲ ತೆಗೆದು
ಹೊಸ ಬಾಗಿಲು ಗೋಡೆ ಕಟ್ಟಿದರೂನು
ಒಂದೆ ಸರ್ತಿ ಪ್ರಾಣಮೂರ್ತಿ ರೀತಿ
ಒಂದೆ ಪ್ರಾಯದಿ ನಗುತಿಹ ಕೀರುತಿ ||

ಒಂದೆ ದಿರುಸು ಶಸ್ತ್ರಾಸ್ತ್ರದ ಬಿರುಸು
ಒಂದೆ ಕಿರುನಗೆ ಮುಗುಳ್ನಗೆ ಸೊಗಸು
ಅಲಂಕಾರ ಮೇಲಚ್ಚಿದರೆಷ್ಟು ಸಗಟು
ಮೊತ್ತದಿ ಹಾಗೆ ಉಳಿಯುವ ಒಗಟು ||

ಎಲ್ಲ ದೇವರಿಗೂ ಇಲ್ಲದ ಮೀಸೆ
ಯೌವನ ಪ್ರಾಯ ಸೂಸುವ ಪರಿಷೆ
ಬದಲೇ ಇಲ್ಲದ ಬಿಳಿ ಮುಖವಾಡ
ಕಿರೀಟ ಧರಿಸೆ ಓಡಾಡುತ ಮೋಡ ||

ಗುಡಿಯಲ್ಲಿರಲಿ ಸಿನಿಮಾಗೆ ಬರಲಿ
ಬದಲೇ ಆಗದ ದೇವರ ಖಯಾಲಿ
ಮತ್ತದೆ ಸೋಜಿಗ ತಿಳಿಯೆ ಮೋಜಿಗ
ಮತ್ತವರವರನೆ ನೋಡುತ ಈ ಜಗ ||

———————————————————————
ನಾಗೇಶ ಮೈಸೂರು
———————————————————————

00488. ಸಪ್ತಮ ಜ್ಞಾನ ಸಂಗಮ (ಮಕ್ಕಳಿಗೆ)


00488. ಸಪ್ತಮ ಜ್ಞಾನ ಸಂಗಮ (ಮಕ್ಕಳಿಗೆ)
_______________________

೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭

ನಮ್ಮ ಪುರಾಣಾದಿ ಸಂಭವಗಳಿಂದೆಲ್ಲಾ ಗಮನಿಸಿದರೆ ಪ್ರತಿ ಸಂಖ್ಯೆಗೂ ತನ್ನದೆ ಆದ ಮಹತ್ವವಿರುವುದು ಕಾಣುತ್ತದೆ. ಪ್ರತಿ ಸಂಸ್ಖೃತಿಯಲೂ ಇದರ ಪ್ರಭಾವವಿರುವುದು ಕಾಣುವುದಾದರೂ, ಭಾರತೀಯತೆಯಲ್ಲಿ ಇದರ ಬಳಕೆ ತುಸು ಹೆಚ್ಚೆ ಎನ್ನಬೇಕು. ಉದಾಹರಣೆಗೆ : ನವ (ಒಂಬತ್ತು) ದ ಪಥವ್ಹಿಡಿದು ಹೊರಟರೆ – ನವಧಾನ್ಯ, ನವರತ್ನ, ನವರಾತ್ರಿ…. ಹೀಗೆ ಸಾಗುತ್ತದೆ. ಪಂಚಕದಲ್ಲೂ ಹೀಗೆ ಪಂಚಭೂತ, ಪಂಚಾಗ್ನಿ, ಪಂಚಕ್ರಿಯ, ಪಂಚಾವಸ್ಥೆಗಳು ಕಾಣ ಬರುತ್ತವೆ. ಇಲ್ಲಿ ಸಪ್ತದ ಕುರಿತು ಚಿಕ್ಕ ಸಂಕಲನ : ಸಪ್ತರ್ಷಿ, ಸಪ್ತನದಿಗಳಿಂದಿಡಿದು, ನಮ್ಮ ವಾರದ ಏಳು ದಿನಗಳವರೆಗೆ – ಕಟ್ಟಿಕೊಡುವ ಯತ್ನ.

೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭

ಸಪ್ತರ್ಷಿಗಳೇಳು ಋಷಿ ಜನರ ಸತ್ಯ
ಮರೀಚೀ ಅತ್ರಿ ಅಂಗೀರಸ ಪುಲಸ್ತ್ಯ
ಪುಲಹ ಕ್ರತು ವಸಿಷ್ಠರ ಸಂಗಮಿಸೆ
ಏಳು ಪ್ರಖ್ಯಾತ ಋಷಿಗಳು ವರಸೆ ||

ಸಪ್ತಮಾತೃಕೆಯರ ದೇವಿ ಮಹಾತ್ಮೆ
ಬ್ರಾಹ್ಮಿ ಮಾಹೇಶ್ವರಿ ಕೌಮಾರಿ ಜಮೆ
ವೈಷ್ಣವಿ ವಾರಾಹಿ ಇಂದ್ರಾಣಿ ಗಣನೆ
ಜತೆ ಸೇರಿ ಚಾಮುಂಡಿ ರಕ್ಕಸ ದಮನೆ ||

ಸೌಂದರ್ಯದತಿಶಯ ರಾಶಿಗಪ್ಸರೆಗಳು
ರಂಭಾ ಮೇನಕೆ ತಿಲೋತ್ತಮ ನಗಲು
ವಾರಕಾಂತೆ ಶಬರಿ ಹಿಡಿಂಬಿ ಸರದಿಗೆ
ಸೈರಂಧ್ರಿ ಒಟ್ಟಿಗೆ ಸುರಸುಂದರಿ ಸುರಗೆ ||

ಸಪುತಾಂಬುಧಿ ಸಪ್ತ ಸಾಗರಗಳೇಳು
ಲವಣ-ಉಪ್ಪಿಗೆ, ಇಕ್ಷು ತಾ ಕಬ್ಬಿನ್ಹಾಲು
ಸುರಾ-ಮದ್ಯದ ಪೂರ, ಕ್ಷೀರಕೆ-ಹಾಲ
ದಧಿ-ಮೊಸರು, ಸರ್ಪಿಸ್ತುಪ್ಪ, ನೀರ್ಜಲ ||

ದೇಹದಲ್ಲಿಯ ಸಪ್ತಧಾತುಗಳು ತಾವು
ರಸ ರಕ್ತ ಮಾಂಸ ಮಜ್ಜೆಗಳ ಫಲಿತವು
ಮೇದಸ್ಸು ಅಸ್ಥಿ ಶುಕ್ರಗಳೆಂಬವರ ಸೇರಿ
ಸಪ್ತ ಧಾತು ವೈಭವ ಹಿಡಿದ ಸರಿದಾರಿ ||

ಅಷ್ಟೇಕೆ ದೂರ ವಾರಗಳೇಳರ ಪ್ರಾಯ
ಭಾನು ಸೋಮ ಮಂಗಳರ ತಿಳಿಕಾಯ
ಬುಧ ಗುರು ಶುಕ್ರ ಗ್ರಹಗಳ ನೆನೆದೆಯ
ಶನಿವಾರ ಜತೆ ಸೇರಲು ಪೂರ್ಣಮಯ ||

– ನಾಗೇಶ ಮೈಸೂರು

00311. ಗೊರಕೆ ಪುರಾಣ


00311. ಗೊರಕೆ ಪುರಾಣ
____________________

ಈ ಗೊರಕೆ ಪುರಾಣ ಬರೆಯಲ್ಹೊರಟರೆ ಅದೇನು ಮೊದಲನೆಯದೂ ಅಲ್ಲ, ಕೊನೆಯದೂ ಅಲ್ಲ. ಹೊಗಳಿದರಾಗಲಿ ತೆಗಳಿದರಾಗಲಿ ಲೆಕ್ಕಿಸದೆ ತನ್ನ ಪಾಡಿಗೆ ತಾನು ತನ್ನ ಕಾರ್ಯಭಾರ ನಿರ್ವಹಿಸುವ ಅದರ ನಿರ್ಲಿಪ್ತ ಪರಿಗೆ ಉರಿದು ಬಿದ್ದಷ್ಟೆ ಸಹಜವಾಗಿ ಭೇಷ್ ಎಂದವರು ಅನೇಕ. ಹೀಗಾಗಿ ಅದರ ವಿಶ್ವರೂಪವನ್ನು ದೂಷಿಸಿ, ಖಂಡಿಸುವ ಬದಲು ಅದರ ಆರೋಹಣಾವರೋಹಣಗಳ ನಯನ ಮನೋಹರ, ಕರ್ಣಾನಂದಕರ ಅದ್ಭುತವನ್ನು ಮನಸಾರೆ ಆಸ್ವಾದಿಸಲು ಕಲಿತರೆ ಅದರೊಂದಿಗಿನ ಸಹಜೀವನ ಸುಲಭ ಸಾಧ್ಯವಾದೀತು. ಅದರಲ್ಲು ಒಟ್ಟಾಗಿ ಜೀವಿಸುವ ಸಾಮಾಜಿಕ ವಾತಾವರಣದಲ್ಲಿ ಗೊರಕೆ ಶೂರರು ಒಬ್ಬರಿದ್ದರು ಕಥೆ ಮುಗಿದಂತೆಯೆ ಲೆಕ್ಕ ; ಮಿಕ್ಕವರು ಬೇಕಿರಲಿ ಬಿಡಲಿ, ನೇರವಾಗಿಯೊ – ಪರೋಕ್ಷವಾಗಿಯೊ, ಲಘುವಾಗಿಯೊ – ತೀವ್ರವಾಗಿಯೊ ಅದರ ಬವಣೆ ಅನುಭವಿಸಿ ತೀರಲೆಬೇಕು. ಅದನ್ನು ತಾಳಲಾಗದ ಸೂಕ್ಷ್ಮಮತಿಗಳಾದರಂತು, ಏಗಬೇಕಾದ ಪರಿಸ್ಥಿತಿ ಇನ್ನೂ ವಿಷಮ. ಪರದೇಶಗಳಲ್ಲಿ ಸಂಗಾತಿ ವಿಪರೀತ ಗೊರಕೆ ಹೊಡೆದು ನಿದ್ರೆಗೆ ಭಂಗ ತರುವ ಕಾರಣವೊಡ್ಡಿ ವಿಚ್ಛೇದನ ಬಯಸಿದವರೂ ಉಂಟು..! …(to read the complete article, click on the page link below and scroll down)……

00311. ಗೊರಕೆ ಪುರಾಣ

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha MN
WeBlog site: nageshamysore.wordpress.com

00178. ಬೀಡಿ ಪುರಾಣ


00178. ಬೀಡಿ ಪುರಾಣ

ಬೀಡಿ ಒಂದು ರೀತಿ ನಮ್ಮ ಸಾಂಸ್ಕೃತಿಕ ಜೀವನದ ಅವಿಭಾಜ್ಯ ಅಂಗ. ಸಿಗರೇಟಿನ ಜತೆ ಪೈಪೋಟಿಗಿಳಿದಂತೆ ಬಿಕರಿಯಾಗುವ ಇದರ ಮಹಿಮೆ ಬರಿಯ ಮಾತುಗಳಲ್ಲಿ ವರ್ಣಿಸಲದಳ. ಸೇದುವವರಿಗೆ ಆನಂದ…

00178. ಬೀಡಿ ಪುರಾಣ

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00000. ಮನದಿಂಗಿತಗಳ ಸ್ವಗತ – ಪರಿವಿಡಿ ಮತ್ತು ಇತರೆ ವಿವರ


______________________________________________________________________________

00000. ಮನದಿಂಗಿತಗಳ ಸ್ವಗತ – ಪರಿವಿಡಿ ಮತ್ತು ಇತರೆ ವಿವರ
______________________________________________________________________________

00140. ಶುಮಾಕರನೆಂಬ ವೇಗದ ವಿಪರ್ಯಾಸ (ಕಿರು ಬರಹ + ಕವನ)

00138. ಎರಡು ದೋಣಿಯ ಮೇಲೆ ಕಾಲಿಟ್ಟ ಬದುಕು…(ಅನುಭವ + ಕಿರು ಪ್ರಬಂಧ)

00139. ಕಾಲದ ಗಡಿಯಾರ . (ಕಿರು ಬರಹ + ಕವನ)

00137. ಮಳೆಯಾಗವ್ಳೆ ಚೌಡಿ.. (ಕಿರು ಬರಹ + ಕವನ)

00136. ಹೋಗ್ಲಿ ಬಿಡಿ, ಹಾಳಾಗ್ಲಿ ಬಿಡ್ರಿ..(ಹೊಸದ ತಂದು ಹಳತ ಮರೆತುಬಿಡಿ..)

00135. ಸುದ್ದಿ ಮುಟ್ಟಿ ಮನ ಸೂತಕ…(ಕಳಚಿದ ಕೊಂಡಿ) (ಕಿರು ಬರಹ + ಕವನ)

00134. ದೇವರು ನಮಗೆ ಹಾಕಿದ ಟೋಪಿ (ಮಕ್ಕಳ ಪದ್ಯ) (ಕಿರು ಬರಹ + ಕವನ)

00133. ಚಿತ್ರಗುಪ್ತನಿಗೊಂದು ಸಲಹೆ (ಸರಿ ತಪ್ಪುಗಳ ಲೆಕ್ಕ) (ಕಿರು ಬರಹ + ಕವನ)

00132. ಅಂಗಜನ ಅಂಗದ ಸದ್ದು … (ಕಿರು ಬರಹ + ಕವನ)

00131. ಮಳೆಯಾಗುತ ಸಾಂಗತ್ಯ…. (ಕಿರು ಬರಹ + ಕವನ).

00130. ರಾಜರತ್ನಂ ನೆನಪಿಗೆ (ಕಿರು ಬರಹ + ಕವನ)

00129. ಪುಸ್ತಕ ವಿಮರ್ಶೆ: ಕಣ್ಣೀರಜ್ಜ ಮತ್ತು ಇತರ ಕಥೆಗಳು (ಪುಸ್ತಕ ವಿಮರ್ಶೆ)

00128. “ಬೀರ” ದೇವರು ಒಳಗಿಳಿದರೆ ಶುರು! (ಕಿರು ಬರಹ + ಕವನ)

00127. ಮುರಿದು ಬಿದ್ದ ಪಿಎಸ್ಪಿ (ಬರಹ + ಕವನ)

00126. ನೂರು ಶತಕಗಳ ಸರದಾರ (ಕಿರು ಬರಹ + ಕವನ)

00125. ಶ್ರೀ ಸತ್ಯನಾರಾಯಣ ವ್ರತದಿ ಪೂಜಾಂಗವಾಗಿಹ ಕಥನ (ಸರಳ ಕಾವ್ಯರೂಪದಲ್ಲಿ)

00124. ಈ ಕೆಮ್ಮೊಣಕೆಮ್ಮು… (ಕಿರು ಬರಹ + ಕವನ)

00123. ತುಳಸಿಗಿಂದು ಸಂಭ್ರಮ (ಕಿರು ಬರಹ + ಕವನ)

00122. ಈ ಸಂಪದ (ಕಿರು ಬರಹ + ಕವನ)

00121. ಮಂಗಳಗ್ರಹಕ್ಕೊಂದು ಗ್ರಹಕೊಂದು ಕಲ್ಲು (ಕಿರು ಬರಹ + ಕವನ)

00120. ಹುಡುಗಾಟ ಆಡಿದ್ರೆ, ಪಟಾಕಿ ಸುಮ್ನೆ ಬಿಡುತ್ತ? (ಕಿರು ಬರಹ + ಕವನ) (04.11.2013)

00119. ದೀಪೋತ್ಸಾಹಂ ಭುವಂಗತೆ.. (ಬರಹ + 2 ಕವನ) (02.11.2013)

00118. ರಾಜ್ಯೋತ್ಸವದ ಮನವಿ : ಪದಗಳಿಗಾಗುತ ದನಿ (ಕವನ + ಕಿರು ಬರಹ) (01.11.2013)

00117. ಗುಜರಾತಿನ ಮೋಡಿ, ಪಟೇಲರ ಹಾಡಿ (ಕವನ + ಕಿರು ಬರಹ)

00116. ‘ಐ’ಗಳ ಪುರಾಣ – 03 …’ಐ’-ಪೋನು, ಪಾಡು, ಪ್ಯಾಡುಗಳ ಪಾಡಿನ ಹರಟೆ, (ಪ್ರಬಂಧ + ಲೇಖನ + ಕಥನ + ಹರಟೆ + ಅನುಭವ)

00115. ಮಂಡೋದರಿ, ನಿನಗ್ಯಾಕಿ ಪರಿ ಕಿರಿಕಿರಿ..? (ಕವನ + ಬರಹ) (WIP)

00114. 00114. ಸಮಾನಾಂತರ ಚಿಂತನಾ ಚಿತ್ತ (ಕವನ + ಕಿರು ಬರಹ)

00113. ಹಾಸ್ಯದಲೆ ಕೊಲ್ಲೆ ಪೂರ್ತಿ, ಸಿದ್ದಹಸ್ತ ನರಸಿಂಹಮೂರ್ತಿ (ಕವನ + ಕಿರು ಬರಹ)

00112. ಪೌರ್ಣಿಮೆ ಚಂದ್ರನ ಕಾಲೆಳೆಯುತ್ತ….(ಕವನ + ಕಿರು ಬರಹ)

00111. ಖೈರುದ್ದೀನನಿಗೆ ಹಬ್ಬದ ಶುಭಾಶಯ ಹೇಳಿ…(ಕವನ + ಕಿರು ಬರಹ)

00110. ಸಿಂಗಪುರ್ ಈಸ್ ಏ ಫೈನ್ ಸಿಟಿ…(ಕವನ + ಕಿರು ಬರಹ)

00109. ಆಯುಧ ಪೂಜೆ, ವಿಜಯದಶಮಿ (2) (ಕವನ + ಕಿರು ಬರಹ)

00108. ಮಹಾಲಯ ಅಮಾವಾಸೆ (ಮಹಾನವಮಿ) (01) (ಕವನ + ಕಿರು ಬರಹ)

00107. ಪಾತ್ರಗಳೆ ರಾಯರಿಗೆ ಸಲ್ಲಿಸಿವೆ ವಂದನ ! (ಕವನ + ಕಿರು ಬರಹ)

00106. …..ನಿನ್ನ ನೆನಸುತ್ತೇನೆ ! (ಕವನ + ಕಿರು ಬರಹ)

00105. ಯಾರದು ಮುಂದಿನ ಪಾಳಿ? (ಕವನ + ಕಿರು ಬರಹ)

00104. ಕೂರ್ಮಾವತಾರ : ಸಾಮಾನ್ಯ ಪ್ರೇಕ್ಷಕನೊಬ್ಬನ ಅನುಭವ, ವಿಮರ್ಶೆಯ ಒಳನೋಟ (ಅನುಭವ + ವಿಮರ್ಶೆ + ಬರಹ)

00103. ಯಾರ ಗೆಲುವು – ‘ಛಿಧ್ರವೋ, ಸಮಗ್ರವೋ? (ಕವನ + ಕಿರು ಬರಹ)

00102. ಪಂಚ್ಲೈನ್ ‘ಪಂಚೆ’ ಸಿದ್ರಾಮಣ್ಣ.. (ಕವನ + ಕಿರು ಬರಹ)

00101. ಯಾರು..? (ಚಿಣ್ಣರ ಹಾಡು) (ಕವನ + ಕಿರು ಬರಹ)

00100. ನಮ್ಮ ಬಾಲ್ಯದ ‘ಶರ್ಲಾಕ್ ಹೋಂ’ “ಎನ್. ನರಸಿಂಹಯ್ಯ” ನೆನಪಲಿ ..(ಕವನ + ಕಿರು ಬರಹ)

00099. ಕೆಂಪೇಗೌಡರೆ ಬನ್ನಿ ಹೀಗೆ ……(ಕವನ + ಕಿರು ಬರಹ)

00098. “ಮುದ್ದಣ್ಣ ಮನೋರಮೆ ಕಲಿತ ಚೀನಿ ಭಾಷೆ – 02” (ಭಾಗ – 02) (ಹಾಸ್ಯಬರಹ + ಹರಟೆ + ವ್ಯಂಗ್ಯ)

00097. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 04” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00096. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 03” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00095. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 02” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00094. ‘ಐ’ಗಳ ಪುರಾಣ – 02 …’ಐ’-ಪೋನು, ಪಾಡು, ಪ್ಯಾಡುಗಳ ಪಾಡಿನ ಹರಟೆ, (ಪ್ರಬಂಧ + ಲೇಖನ + ಕಥನ + ಹರಟೆ + ಅನುಭವ)

00093. ಅಲ್ಲಿರೋದು ನಮ್ಮನೆ, ಇಲ್ಲಿರೋದು ಸುಮ್ಮನೆ…(ಕವನ + ಕಿರು ಬರಹ)

00092. ಗಜಾನನ ಗಜ-ಮೂಷಿಕಾಸುರ ಕಥೆ (ಕವನ + ಕಿರು ಬರಹ)

00091. ಹುಟ್ಟುಹಬ್ಬದ ನಮಸ್ತೆ..(ಪೂಚಂತೆ ಯಾರಂತೆ?) (ಕವನ + ಕಿರು ಬರಹ)

00090. ಅವರಿತ್ತ ಜೀವನ ಭಿಕ್ಷೆ (ಕವನ + ಕಿರು ಬರಹ)

00089. ಶ್ರಾವಣ (ಕವನ + ಕಿರು ಬರಹ)

00088. ಮಿನುಗುತಾರೆ, ಗುನುಗುತ್ತಾರೆ… (ಕವನ + ಕಿರು ಬರಹ)

00087. ಡಾಲರ ರೂಪಾಯಿ ಲೆಕ್ಕಾಚಾರ (ಕವನ + ಕಿರು ಬರಹ)

00086. ಗೋಕುಲದಲಿ ಅಷ್ಟಮಿ , ಗೋಕುಲಾಷ್ಟಮಿ.. (ಕವನ + ಕಿರು ಬರಹ)

00085. ಜಲಚಕ್ರ (ಕವನ + ಕಿರು ಬರಹ)

00084. ವರಮಹಾಲಕ್ಷ್ಮಿ ವ್ರತ (ಕವನ + ಕಿರು ಬರಹ)

00083. ಅಷ್ಟಲಕ್ಷ್ಮಿಯರ ವರ (ಕವನ + ಕಿರು ಬರಹ)

00082. ಭಾರತಿಮನ, ಭಾರತಿತನ! (ಕವನ)

00081. ಮತ್ತೊಂದು ಸ್ವಾತಂತ್ರದ ದಿನ…. (ಕವನ + ಕಿರು ಬರಹ)

00080. ನಿಯತಿಯ ಶಿರ (ಕವನ)

00079. ಬದಲಾಗಬೇಕಾಗಿದ್ದು ನಾವು-ನೀವಾ ಅಥವಾ ಈ ವ್ಯವಸ್ಥೆಯಾ? (ಚಿಂತನೆ + ಲೇಖನ + ವಾಸ್ತವ )

00078. ಕಟ್ಟುವ ಬನ್ನಿ ಕನ್ನಡ ಉಳಿಸಿ ಬೆಳೆಸುವ ಪೀಳಿಗೆ (ಚಿಂತನೆ + ಅಂಕಣ: ಚಿಂತಕರ ಚಾವಡಿ (ಕನ್ನಡ ಸಂಘ)+ ಲೇಖನ + ಸಿಂಚನ)

00077. ಮೋಡ ಚುಂಬನ..ಗಾಢಾಲಿಂಗನ.. (ಕವನ + ಕಿರು ಬರಹ)

00076. ಎರಡು ಆಷಾಡ ಗೀತೆಗಳು (ಕವನ + ಕಿರು ಬರಹ)

00075. ಪುಟ್ಟನ ಅಳಲು .. (ಕವನ + ಕಿರು ಬರಹ)

00074. ಕಲಿಯಲು ಎಲ್ಲಿದೆ ಬಿಡುವು? (ಕವನ + ಕಿರು ಬರಹ)

00073. ದೆವ್ವ ಭೂತದ ಭೀತಿ! (ಕವನ)

00072. ಆಧ್ಯಾತ್ಮಿಕ ಕರ ಬಾಡಿಗೆ ತರ..! (ಕವನ + ಕಿರು ಬರಹ)

00071. ಅಸಂಗತ..! (ಕವನ + ಕಿರು ಬರಹ)

00070. ಹೆಣ್ಮನದ ಹವಾಗುಣ….! (ಕವನ + ಕಿರು ಬರಹ)

00069. ಬಿಟ್ಟುಬಿಡಿ ಸಿಗರೇಟು…! (ಬಿಟ್ಟು ಬೀಡಿ ಸಿಗರೇಟು..) (ಕವನ + ವಾಸ್ತವ)

00068. ಚಿಲ್ಲರೆ ಅಂಗಡಿ ಕಾಕ , ರೀಟೇಲಲಿ ಅಕ್ಕಿ..! ( ಕವನ + ವಾಸ್ತವ)

00067. ಧೂಮಸ್ನಾನ….! (ಕವನ + ವಾಸ್ತವ)

00066. ಧೂಮ-ಸಾಹಿತ್ಯ…! (ಕವನ + ವಾಸ್ತವ)

00065. ಸರಿ ತಪ್ಪುಗಳ ಲೆಕ್ಕ (ಚಿತ್ರಗುಪ್ತ ವಾಗ್ವಾದ – ಪೂರ್ವಾರ್ಧ: ಲಘು ಹಾಸ್ಯದ ಧಾಟಿ) (ಕವನ + ಕಿರು ಬರಹ)

00064. ಗಂಗಾವತಾರಣ (ಗಂಗಾ + ಅವತಾರ + ರಣ) (ಕವನ + ಬರಹ + ವಾಸ್ತವ + ಪೌರಾಣಿಕ)

00063. ಗಂಗಾವತರಣ…! (ಕವನ + ಕಿರು ಬರಹ)

00062. ಪಾಂಚಾಲಿಯ ಹಾಡು (ಕವನ + ಕಿರು ಬರಹ)

00061. ಈ ಅಪ್ಪಗಳು (ಕವನ + ಕಿರು ಬರಹ)

00060. ಸಾವೆಂಬ ಸಕಲೇಶಪುರದಲ್ಲಿ….!

00059. ನಿರಂತರ ಕುಣಿತ! (ಕವನ)

00058. ಗುಂಪಿನೊಳಗವಿತಿದೆಯೆ ವರ್ಣ? (ಕವನ + ಕಿರು ಬರಹ)

00057. ಈ ದಿನ ತನು ಮನ ಭಾವ….! (ಕವನ)

00056. ಹಿತ್ತಲ ಗಿಡದ ಮದ್ದು (ಕವನ + ಕಿರು ಬರಹ)

00055. ಏಕಾಂತದ ಏಕಾಂತ…! (ಕವನ + ಕಿರು ಬರಹ)

00054. ಈ ಅಮ್ಮಗಳು (ಕವನ + ಕಿರು ಬರಹ)

00053. ಚುನಾವಣಾ ಫಲಿತಾಂಶ ! (ಕವನ)

00052. ಸೃಷ್ಟಿ ರಹಸ್ಯ..! (ಈ ಅಂಡ ಪಿಂಡ ಬ್ರಹ್ಮಾಂಡದ ಸಶೇಷ ಭಾಗ) (ಕವನ + ಕಿರು ಬರಹ)

00051. ಈ ಅಂಡ ಪಿಂಡ ಬ್ರಹ್ಮಾಂಡ …(ಕವನ + ಕಿರು ಬರಹ)

00050. ಈ ಏಪ್ರಿಲ್ಲಿಗೇಕೊ ಮುನಿಸು…(ಕವನ + ಕಿರು ಬರಹ)

00049. ಯುಗಾದಿಯಾಗಲಿ ಜಾಗತಿಕ…! (ಕವನ)

00048. ಒತ್ತಡಗಳ ಬೆತ್ತ ! (ಕವನ)

00047. ಸುಖಕಿರುವ ಅವಸರ….! (ಕವನ)

00046. ತ್ಸುನಾಮಿ ಹೊತ್ತಲಿ…(ಕವನ)

00045. ಗುಬ್ಬಣ್ಣನ ಸ್ವಗತಗಳು (ಚುಟುಕಗಳು)

00044. ಮುಗಿದರೆ ಇಹ ವ್ಯಾಪಾರ…..(ಕವನ)

00043. ಮಾತಿಗೊಬ್ಬರ ….(ಕವನ)

00042. ವಚನದಲ್ಲಿ ನಾಮಾಮೃತ ತುಂಬಿದ ವಚನಾಂಜಲಿ ಕಾರ್ಯಕ್ರಮ (ವರದಿ) (ಕನ್ನಡ ಸಂಘ + ವರದಿ + ಲೇಖನ)

00041. ‘ಕನ್ನಡ ಪ್ರಭ’ದ ಕಬ್ಬಿಗ ತೋಟದಲ್ಲರಳಿದ ಡಬ್ಲ್ಯು. ಬಿ. ಏಟ್ಸನ ಕವನ : ನನ್ನ ಮೊದಲ ಅನುವಾದದ ಯತ್ನ..(ಕವನ + ಬರಹ)

00040. ಆಗ್ನೇಯೇಷ್ಯಾದ ಹಣ್ಣಿನ ರಾಣಿ – ‘ಮಾಂಗಸ್ಟೀನ್’! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00039. “ಮುದ್ದಣ್ಣ ಮನೋರಮೆ ಕಲಿತ ಚೀನಿ ಭಾಷೆ – 01!” (ಹಾಸ್ಯಬರಹ + ಹರಟೆ + ವ್ಯಂಗ್ಯ)

00038 – ಹೊಸ (ಹಳೆ) ರುಚಿ: “ಹಸಿ-ಹುಳಿ” (ಹೊಸ ರುಚಿ + ಲಘು ಹಾಸ್ಯ)

00037 – ರುಚಿಗೆ ರಾಜಾ, ವಾಸನೆಯೆ ಗಾರ್ಬೇಜಾ! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00036 – ಈ ಕೆಂಪಮ್ಮನ ಹೆಸರೆ ಡ್ರಾಗನ್ ಫ್ರೂಟು, ನೋಡಲೆ ಸೊಗಸು ಅವಳಾಕಿದ ಸೂಟು! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00035 – ಜುಟ್ಟಿನ ಬಟ್ಟೆ ಹೊದ್ದ ‘ಕೇಶೀರಾಜ’, ಮುತ್ತಿನ ಬಣ್ಣದ ‘ರಂಬೂತಾನ್’ ಹಣ್ಣೆ ಖನಿಜ! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00034 – ವಿಷಾಪಹಾರಿ ‘ಡ್ರಾಗನ್ನಿನ ಕಣ್ಣು’, ಈ ರುಜಾಪಹಾರಿ ‘ಲೊಂಗನ್’ ಹಣ್ಣು! (ಹಣ್ಣುಗಳ ಪರಿಚಯ + ಲಘು ಹಾಸ್ಯ)

033A – ಸಿಂಗಾಪುರದ “ಹಾವ್ ಪಾರ ವಿಲ್ಲಾ” ದೃಶ್ಯ ಕಲಾ ತೋಟ! (photos) (ಪ್ರವಾಸಿ ತಾಣ ಪರಿಚಯ + ಪ್ರವಾಸ ಅನುಭವ)

033 – ಸಿಂಗಪುರದಲ್ಲಿನ ಚೀಣಿ ದೃಶ್ಯ ಕಾವ್ಯ “ಹಾವ್ ಪಾರ್ ವಿಲ್ಲಾ” ( ಪ್ರವಾಸಿ ತಾಣ ಪರಿಚಯ + ಪ್ರವಾಸ ಅನುಭವ + ಲಘು ಹಾಸ್ಯ)

00032 – ಸಂಪತ್ತಿನ ಬೀಜ, ಸಸಿ ಮತ್ತು ವೃಕ್ಷಗಳ ನೀತಿ ಭೋಧಕ ಕಥೆ (ಆಧುನಿಕ ಪುರಾಣ ಕಥಾ ಕಾಲಕ್ಷೇಪ)! (ಆಧುನಿಕ ನೀತಿ ಭೋಧೆ + ವಿಡಂಬನೆ + ವ್ಯಂಗ್ಯ)

00031 – ಅಪೂರ್ವ ಕವನದ ಕುರಿತು ಹಿರಿಯ ಕವಿಯೊಬ್ಬರ ಮಾತು (ಲೇಖನ + ಬರಹ + ಪ್ರಬಂಧ + ಕವನ + ವ್ಯಕ್ತಿತ್ವ )

00030 – ಪುಸ್ತಕ ವಿಮರ್ಶೆ: ಮಾವೋನ ಕೊನೆಯ ನರ್ತಕ (ಪುಸ್ತಕ ವಿಮರ್ಶೆ)

00029. ಇರುವೆ ಮತ್ತು ಒಂದು ತುಂಡು ರೊಟ್ಟಿಯ ಕಥೆ! (ಆಧುನಿಕ ನೀತಿ ಭೋಧೆ + ವಿಡಂಬನೆ + ವ್ಯಂಗ್ಯ)

00028. ಸಿಂಗನ್ನಡಿಗರಿಂದ ಸಿಂಗನ್ನಡಿಗರಿಗಾಗಿ! – ಸಿಂಗಾರ ಉತ್ಸವ 2013 (ಕನ್ನಡ ಸಂಘ + ವರದಿ + ಲೇಖನ )

00027. ಗುಬ್ಬಣ್ಣನ ಯೂನಿವೆರ್ಸಲ್ ಸ್ಟುಡಿಯೊ ದಂಡಯಾತ್ರೆ ! (ಭಾಗ – 02) (ಹಾಸ್ಯಬರಹ + ಹರಟೆ)

00026. ಗುಬ್ಬಣ್ಣನ ಯೂನಿವೆರ್ಸಲ್ ಸ್ಟುಡಿಯೊ ದಂಡಯಾತ್ರೆ ! (ಭಾಗ – 01) (ಹಾಸ್ಯಬರಹ + ಹರಟೆ)

00025. ಸರಿಯಪ್ಪಾ ಸಾಕು ಬಿಡು ಕಲಿಸಿದ್ದು ಸುಗ್ಗಿ, ಉರು ಹೊಡೆದೇ ಕಲಿವೆ ನಾ ಕನ್ನಡದ ಮಗ್ಗಿ! ( ಲಘು ಹಾಸ್ಯ + ಕಥನ + ಅನುಭವ)

00024. ಜತೆ ನೀ ಕಾಡಿಗೆ , ಹೋಗಲಿಲ್ಲವೇಕೆ ಊರ್ಮಿಳೆ? (ಬರಹ + ಕಾವ್ಯಬರಹ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00023. ಶೂರ್ಪನಖಿ, ಆಹಾ! ಎಂಥಾ ಸುಖಿ! (ಬರಹ + ಕಾವ್ಯಬರಹ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00022. ದುರಂತ ನಾಯಕಿ ಸೀತೆಯ ಬದುಕು………! (ಬರಹ + ಕಾವ್ಯಬರಹ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00021. ಶ್ರೀ ರಾಮನಿಗೇನಿತ್ತನಿವಾರ್ಯ….? (ಬರಹ + ಕವನ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00020. ಈ ದಿನ ಜನುಮದಿನಾ…..! (ಬರಹ + ಕವನ + ನೆನಪು + ಭಾವನೆ)

00019. ‘ಐ’ಗಳ ಪುರಾಣ – 01….’ಐ’-ಪೋನು, ಪಾಡು, ಪ್ಯಾಡುಗಳ ಪಾಡಿನ ಹರಟೆ, (ಪ್ರಬಂಧ + ಲೇಖನ + ಕಥನ + ಹರಟೆ + ಅನುಭವ)

00018. ಸಿಂಗಪೂರ ಸುತ್ತಾಟ, ಊಟ – ಸಿಕ್ಕಿತ ಕನಿಷ್ಟ ರೋಟಿ, ಪರಾಟ..? (ಪ್ರವಾಸದ ಅನುಭವ + ಕವನ + ಲಘು ಹಾಸ್ಯ )

00017. ಹುಡುಕೂ, ವರ್ಷದ್ಹುಡುಕು ..! (ಹಬ್ಬ + ಹರಿದಿನ + ಸಂಪ್ರದಾಯ + ಬರಹ + ಲೇಖನ)

00016. ಅಂತರಂಗದಂತಃಪುರದ ಕದಪದ ಮನದನ್ನೆಯರು…! (ಬರಹ + ಕವನ + ಅನುಭವ + ಆಡಳಿತಾತ್ಮಕ + ಲಘು ಹಾಸ್ಯ)

00015 – ತರ ತರ ಋತು ಸಂವತ್ಸರ……ಹಳತೊಸತು ಮೇಳೈಸಿತೊ ಬೆರೆತು! (ಹಬ್ಬ + ಹರಿದಿನ + ಸಂಪ್ರದಾಯ + ಬರಹ + ಕವನ)

00014 – ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ….! (ನೀಳ್ಗಾವ್ಯ + ಕಾವ್ಯ + ಪೌರಾಣಿಕ)

00013 – ಹಾರುತ ದೂರಾದೂರ…..! (ಅನುಭವ + ಪ್ರಬಂಧ + ಹಾಸ್ಯಲೇಖನ + ಲಘು ಹಾಸ್ಯ)

00012. ಹೆಚ್ಚು ಬೆಲೆಯೆಂದರೆ ಶ್ರೇಷ್ಟ ಗುಣಮಟ್ಟವಿರಬೇಕೆಂದೇನಿಲ್ಲ, ಗೊತ್ತಾ! (ಆಡಳಿತಾತ್ಮಕ + ಮ್ಯಾನೇಜ್ಮೆಂಟು + ವ್ಯವಸ್ಥೆ + ವಾಸ್ತವ)

00011. ಲಘು ಪ್ರಬಂಧ: ನನ್ನ ಪ್ರಧಾನ ಸಂಪಾದಕ ಹುದ್ದೆ…! (ಅನುಭವ + ಪ್ರಬಂಧ + ಹಾಸ್ಯಲೇಖನ + ಲಘು ಹಾಸ್ಯ)

00010. ವಿಮರ್ಶೆ : ಕವನ ಸಂಕಲನ: “ಅಂತರ ಹಾಗು ಇತರ ಕವನಗಳು” ಕವಿ: ವಸಂತ ಕುಲಕರ್ಣಿ

00009. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 01” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00008. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(03) (ಬರಹ + ವಿಡಂಬನೆ + ಲೇಖನ)

00007. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(02) (ಬರಹ + ವಿಡಂಬನೆ + ಲೇಖನ)

00006. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(01) (ಬರಹ + ವಿಡಂಬನೆ + ಲೇಖನ)

00005. ಮೆಲ್ಲುಸಿರೆ ಸವಿಗಾನ….! (ಬರಹ + ಭಾವನೆ + ವಿಮರ್ಶೆ)

00004. ಗಮನೇಶ್ವರಿಯ ಗಮಕ, ವಯಸ್ಸಿನಾ ಮಯಕ…! (ಬರಹ + ಅನುಭವ)

00003. ನೀನೋದಿದ ವಿದ್ಯೆಗೆಲ್ಲಿಡುವೆ ನೈವೇದ್ಯ? (ಲೇಖನ)

00002. ಏನಾಗಿದೀದಿನಗಳಿಗೆ? (ಲೇಖನ)

00001. ಮೊದಲ ಬ್ಲಾಗ್ – ಮನದಿಂಗಿತಗಳ ಸ್ವಗತ! (ಬರಹ + ಕವನ)