00512. ಪರೀಕ್ಷೆಯ ಲೆಕ್ಕಾಚಾರ


00512. ಪರೀಕ್ಷೆಯ ಲೆಕ್ಕಾಚಾರ
______________________

  
(picture source wikipedia : https://en.m.wikipedia.org/wiki/File:Test_(student_assessment).jpeg)

ಒಲ್ಲದ ಮನಸಿನಿಂದ ಪುಸ್ತಕ ಹಿಡಿದು ಪರೀಕ್ಷೆಗೆ ಓದಿಕೊಳ್ಳಲು ಒದ್ದಾಡುತ್ತಿದ್ದ ಮಗನನ್ನು ಸಾಮ, ದಾನ,ದಂಡ, ಭೇಧೋಪಾಯಗಳೆಲ್ಲದರ ಬಳಕೆ ಮಾಡುತ್ತ ಸಿದ್ದಗೊಳಿಸಲು ಹೆಣಗುತ್ತ ಕುಳಿತಿದ್ದೆ. ಅದೇ ಹೊತ್ತಿನಲ್ಲಿ ಟೀವಿಯಲ್ಲಿ ಪ್ರವೇಶ ಪರೀಕ್ಷೆಯ ನಂತರದ ಆತಂಕಪೂರ್ಣ ಚರ್ಚೆ ನಡೆಯುತ್ತಾ ಇತ್ತು. ಒಂದು ಕಾಲದಲ್ಲಿ ನಾವೂ ಇದನ್ನೆಲ್ಲಾ ಅನುಭವಿಸಿ ಮುಂದೆ ಸಾಗಿದ್ದವರೆ. ಆದರೆ ಆ ದಿನದಲ್ಲಿ ಕಾಡಿದ್ದ ಅದೆಷ್ಟೊ ಆತಂಕ, ಒತ್ತಡಗಳು ಕೇವಲ ಆತಂಕ, ಅಜ್ಞಾನ, ನಿಖರ ಗಮ್ಯವಿಲ್ಲದ ಒದ್ದಾಟಗಳ ಕಾರಣದಿಂದ ಉಂಟಾದದ್ದು. ಇಂದು ತಿರುಗಿ ನೋಡಿದರೆ ನಾನು ಓದಿದ್ದಕ್ಕೂ, ಮಾಡುತ್ತಿರುವ ಕೆಲಸಕ್ಕೂ ನೇರ ಸಂಬಂಧವೆ ಇಲ್ಲ. ವಿದ್ಯಾರ್ಹತೆ ಕೇವಲ ಕೆಲಸ ಗಿಟ್ಟಿಸುವ ಆರಂಭದ ರಹದಾರಿಯಾಯ್ತೆಂಬುದನ್ನು ಬಿಟ್ಟರೆ ಮಿಕ್ಕೆಲ್ಲ ಹೊಸ ಹೋರಾಟ, ಪರೀಕ್ಷೆಗಳೆ ಎದುರಾದದ್ದು ವಾಸ್ತವ ಸತ್ಯ. ನಮ್ಮ ವಿದ್ಯಾರ್ಹತೆ, ವಿದ್ಯಾಭ್ಯಾಸ ಆ ಹೋರಾಟಕ್ಕೆ ನಮ್ಮನ್ನು ಸಿದ್ದಪಡಿಸಿರಲೆ ಇಲ್ಲ. ಆದರೂ ನಾವು ಅದೆ ಮರೀಚಿಕೆಯ ಹಿಂದೆ ನಮ್ಮ ಭವಿಷ್ಯದ ಪೀಳಿಗೆಯನ್ನು ತಳ್ಳುತ್ತ ಕುರಿಮಂದೆಗಳ ಹಾಗೆ ಸಾಗುತ್ತಿದ್ದೇವಲ್ಲ ಅನಿಸಿ ಖೇದವೂ ಆಯ್ತು.

ಪ್ರತಿಯೊಬ್ಬ ತಂದೆ ತಾಯಿಯರಲ್ಲೂ (ಅದರಲ್ಲೂ ಮಧ್ಯಮ ವರ್ಗದ ಕುಟುಂಬಗಳಲ್ಲಿ) ಈ ಪರೀಕ್ಷೆ ಅನ್ನುವ ಭೂತ ಕಾಡುವ ಪರಿ ಅನನ್ಯ. ಅಲ್ಲಿನ ಸಾಧನೆ ಮತ್ತು ಗಳಿಕೆಯ ಅಂಕಗಳೆ ಮುಂದಿನೆಲ್ಲಾ ಹಂತಕ್ಕೂ ಮಾನದಂಡವಾಗಿ ಬಿಡುವುದರಿಂದ ಅದು ಮಕ್ಕಳಲ್ಲಿ ಹುಟ್ಟಿಸುವ ಉದ್ವೇಗ, ಆತಂಕವೂ ಅಳತೆ ಮೀರಿದ ವ್ಯಾಪ್ತಿಯದು. ಈ ಶ್ರೇಣಿ ಅಂಕಗಳೆ ಜೀವನದ ಅಂತಿಮ ಗಮ್ಯ ಅನ್ನುವಷ್ಟರ ಮಟ್ಟಿಗೆ ಭ್ರಮೆ ಹುಟ್ಟಿಸಿ ಎಲ್ಲರನ್ನು ಆ ಒಂದು ಹುಸಿ ಗಮ್ಯದ ಹಿಂದೆ ಓಡಿಸಿಬಿಡುತ್ತವೆ – ಸದಾ ಬೆನ್ನಟ್ಟುತ್ತಾ ನಡೆಯುವ ಹಾಗೆ. ವಿಧ್ಯಾರ್ಥಿ ಜೀವನ ಭವಿಷ್ಯದ ಜೀವನಕ್ಕೆ ಸಿದ್ದ ಮಾಡುವ ಕಲಿಕೆಯ ವೇದಿಕೆಯಾಗದೆ ಅಂಕಗಳಿಕೆ ಸ್ಪರ್ಧೆಯ ಪಂಥವಾಗಿ ಪರಿಣಮಿಸುವುದು ಈಗ ಎಲ್ಲೆಡೆ ಕಾಣುವ ಸತ್ಯ. ವಿಷಾದವೆಂದರೆ ಸಾಮಾಜಿಕ ಪರಿಸರದಲ್ಲಿ ಬದುಕುವ ಜನ ಇದನ್ನು ಒಪ್ಪಲಿ ಬಿಡಲಿ – ಸುತ್ತಲಿನ ಪ್ರಚಲಿತ ಪರಿಸರದ ಒತ್ತಡ ಅವರನ್ನು ಈ ಹಾದಿಯನ್ನೇ ಹಿಡಿದು ಮುನ್ನಡೆಯುವಂತೆ ಪ್ರೇರೇಪಿಸುತ್ತದೆ – ಸಹಮತದಿಂದಲಾದರೂ ಸರಿ, ವಿಧಿಯಿಲ್ಲದೇ ಅನುಕರಿಸಬೇಕಾದ ಅನಿವಾರ್ಯದಿಂದಾದರೂ ಸರಿ. ಹಿಂದಿನ ಕಾಲದಲ್ಲಿದ್ದ, ಗುರುಕುಲದಲ್ಲಿದ್ದು ಜೀವನವೆಂದರೆ ಏನೆಂದು ಮನೆಯಿಂದ ಹೊರಗೆ, ಕಾಡಿನ ಮತ್ತು ಆಶ್ರಮದಂತಹ ಕಠಿಣ ವಾತಾವರಣದಲ್ಲಿ ಕಲಿಯುವ ವ್ಯವಸ್ಥೆ ಈಗ ಇರದ ಕಾರಣ, ಸ್ವಾಭಾವಿಕ ಹಾಗೂ ನೈಸರ್ಗಿಕ ಕಲಿಕೆಯನ್ನು ಹಣ ತೆತ್ತು ಕಲಿಯುವ-ಪಡೆಯುವ ವಾಣಿಜ್ಯೀಕೃತ ಕೃತಕ ಪರಿಸರ ಈಗಿನ ನಾಗರೀಕ ಜೀವನದ ಮಾದರಿ.ಇದು ಪರಿಸ್ಥಿತಿಯ ಒಂದು ಮುಖ.

ಇನ್ನು ಈ ವ್ಯವಸ್ಥೆಯಲ್ಲಿ ಈಜಿಕೊಂಡು ಸಂಭಾಳಿಸಬೇಕಾದ ಮಕ್ಕಳನ್ನು ನೋಡಿದರೆ – ಕೆಲವರು ಈ ಪರಿಸರಕ್ಕೆ ನೀರಿಗೆ ಬಿದ್ದ ಮೀನಿನಷ್ಟೆ ಸಹಜವಾಗಿ ಹೊಂದಿಕೊಳ್ಳಬಲ್ಲ ಸಾಮರ್ಥವಿದ್ದವರು ಮನಃಪೂರ್ವಕವಾಗಿಯೊ, ಪರಿಶ್ರಮದ ಸಹಾಯದಿಂದಲೊ ಸುಲಲಿತವಾಗಿ ಮುನ್ನಡೆಯುತ್ತಾರೆ. ಸಮಸ್ಯೆ ಅಥವಾ ಪ್ರಶ್ನೆ ಬರುವುದು ಆ ಗುಂಪಿನಲ್ಲಲ್ಲ. ಅದೇ ಮಕ್ಕಳ ಸಮೂಹದಲ್ಲಿ ಮತ್ತೆರಡು ಗುಂಪೂ ಮಿಳಿತವಾಗಿರುತ್ತದೆ. ಮೊದಲನೆಯದು ಆ ಅಂಕಗಳಿಕೆಯ ಸಾಮರ್ಥ್ಯವಿರದ, ಆ ಮಟ್ಟದ ಸ್ಪರ್ಧಾತ್ಮಕ ಜಗದಲ್ಲಿ ಏಗಲಾರದ ದುರ್ಬಲ (ಪ್ರಾಯಶಃ ಅದರಿಂದಲೆ ಕೀಳರಿಮೆಯಿಂದ ಬಳಲುವ ) ಗುಂಪು. ಎರಡನೆಯದು ದುರ್ಬಲವಲ್ಲದಿದ್ದರೂ ಆ ಗುಂಪಿನ ಮಕ್ಕಳು ವಿಶೇಷ ಶಕ್ತಿ ಸಾಮರ್ಥ್ಯಗಳನ್ನು ದೈವದತ್ತವಾಗಿ ಪಡೆದೂ ಅಂಕಗಳಿಕೆಯಂತಹ ವ್ಯವಸ್ಥೆಯಲ್ಲಿ ಹಿಂದೆ ಬಿದ್ದಿರುವವರು; ಯಾಕೆಂದರೆ ಅವರ ಕಲಿಕೆಯ ವಿಧಾನ ಮಾಮೂಲಿಗಿಂತ ವಿಭಿನ್ನವಾದದ್ದು. ಸಾಂಪ್ರದಾಯಿಕ ಕಲಿಕೆ, ಪರೀಕ್ಷೆಗಳು ಅವರ ಮನಸ್ಥಿತಿಗೆ ಹೊಂದಾಣಿಕೆಯಾಗುವಂತದ್ದಲ್ಲ. ದುರದೃಷ್ಟವಶಾತ್ ನಮ್ಮ ಶಿಕ್ಷಣದ ವ್ಯವಸ್ಥೆ ಸರಾಸರಿ ವಿದ್ಯಾರ್ಥಿ ಜನಾಂಗದ ಪರಿಗಣನೆಯಿಟ್ಟುಕೊಂಡು ವಿನ್ಯಾಸಗೊಳಿಸಿದ್ದು. ಹೀಗಾಗಿ ಬಹುತೇಕ ‘ಸರಾಸರಿ ವರ್ಗ’ ಇದರಲ್ಲೇ ಹೇಗೊ ಏಗಿ, ಕೊಸರಾಡಿ ಮೇಲೆದ್ದು ಬಂದರೂ ಈ ಮೇಲೆ ಗುರುತಿಸಿದ ಎರಡು ಗುಂಪುಗಳು ಹೊಂದಿಕೊಳ್ಳಲಾಗದ ಒದ್ದಾಡುತ್ತಲೆ ನರಳುತ್ತವೆ. ಈ ಎರಡು ವರ್ಗಗಳನ್ನು ಹತ್ತಿರದಿಂದ ನೋಡಿ, ಅವರ ಶಕ್ತಿ – ಸಾಮರ್ಥ್ಯ – ಮಿತಿಗಳನ್ನು ಗುರ್ತಿಸಿ ಅದಕ್ಕೆ ಸರಿಹೊಂದುವ ವಿದ್ಯಾಕ್ರಮದ ಹಾದಿಯಲ್ಲಿ ಅವರನ್ನು ಮುನ್ನಡೆಸುವ ಶಿಕ್ಷಣ ಕ್ರಮ ನಮ್ಮಲ್ಲಿ ಇಲ್ಲ. ಈ ಕಾರಣದಿಂದ ಹೋಲಿಕೆಯಲ್ಲಿ ಈ ಎರಡು ಗುಂಪುಗಳು ಹಿಂದೆ ಬಿದ್ದು ಅಥವಾ ದೂಷಣೆ, ಶೊಷಣೆಗೊಳಗಾಗಿ ನರಳಬೇಕಾಗುತ್ತದೆ. ಕೆಲವರು ಹೇಗೊ ಹೆಣಗಾಡಿ ಬದುಕುತ್ತಾರಾದರೂ , ಮತ್ತೆ ಕೆಲವರು ಮುರುಟಿಹೋಗುತ್ತಾರೆ ಕೀಳರಿಮೆಯ ಕಂದರದಲ್ಲಿ.

ಗೊತ್ತಿದ್ದೊ ಗೊತ್ತಿಲ್ಲದೆಯೊ ಅಥವಾ ಬೇರೆ ದಾರಿಯಿಲ್ಲದ ಅನಿವಾರ್ಯತೆಯಿಂದಲೊ – ಈ ಎರಡು ಗುಂಪಿನ ಮಕ್ಕಳ ನರಳಿಕೆಗೆ ಕಾರಣಕರ್ತರಾಗುವಲ್ಲಿ ಪೋಷಕರ ಪಾತ್ರ ಗಣನೀಯ. ಸರೀಕರಲ್ಲಿ ತಲೆಯೆತ್ತಿ ನಿಲ್ಲುವ ಮರ್ಯಾದೆಯ ಪ್ರಶ್ನೆಗೊ, ತಂತಮ್ಮ ನಿಜವಾಗದ ಕನಸು ಮಕ್ಕಳಲ್ಲಿಯಾದರೂ ಸಾಕಾರವಾಗಲೆಂಬ ಹುಮ್ಮಸ್ಸಿನಲ್ಲಿ ಮಕ್ಕಳನ್ನು ವಿಪರೀತ ಒತ್ತಡಕ್ಕೊಳಪಡಿಸಿ ನಿರೀಕ್ಷೆಯ ಗಾಳಿ ಗೋಪುರ ಕಟ್ಟಿಬಿಡುತ್ತಾರೆ. ಅಲ್ಲೇ ಸಮಸ್ಯೆಯ ಮೂಲವಿರುವುದು – ಆ ಮಕ್ಕಳ ವೈಯಕ್ತಿಕ ಸಾಮರ್ಥ್ಯ, ಪ್ರತಿಭೆ, ಪರಿಮಿತಿ, ತೊಡಕುಗಳ ಗಣನೆಯಿಲ್ಲದೆ ನಡೆಯುವ ಈ ಪ್ರಕ್ರಿಯೆ ಅವರ ಮೇಲೆ ಅಸಾಧಾರಣ ಒತ್ತಡ ಹಾಕಿ ಕಂಗೆಡಿಸಿ ಅಸಮರ್ಥರನ್ನಾಗಿಸಿಬಿಡುವುದು ವಾಸ್ತವದ ಕ್ರೂರತೆ. ಇಷ್ಟೆಲ್ಲಾ ಚಿಂತನೆ ಮನಸಿನ ಪಟಲದಲ್ಲಿ ಮೂಡಿದಾಗ ಓದಲು, ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಲು ನಾವು ಹಾಕುತ್ತಿರುವ ಒತ್ತಡ (ಸರಾಸರಿ ಮಕ್ಕಳಲ್ಲೂ ಕೂಡ) ಅರ್ಥರಹಿತವಲ್ಲವೇ ಎನಿಸಿತು. ಆ ಒತ್ತಡದ ಜತೆ ಜತೆಯೇ ಅವರಿಗೆ ಮತ್ತೊಂದು ಸಂದೇಶವನ್ನು ಸತತವಾಗಿ ಕೊಡುತ್ತಲೇ ಇರಬೇಕೆನಿಸಿತು – ಅಂಕ, ಪರೀಕ್ಷೆಗಳೇ ಜೀವನದಂತಿಮ ಗಮ್ಯವಲ್ಲ ಎಂದು. ಅವರಲ್ಲಿ ಆ ನಂಬಿಕೆ ಆತ್ಮವಿಶ್ವಾಸ ಹುಟ್ಟಿದಾಗಲೆ, ಏನೋ ಓದಿ ಯಾರದೋ ಕೈ ಕೆಳಗಿನ ವ್ಯವಸ್ಥೆಯ ಕೊಂಡಿಯೊಂದರ ಕೊಂಡಿಯಾಗಿ ಎಲ್ಲೋ ಕಳೆದುಹೋಗುವುದರ ಬದಲು ತಾವೇ ಆ ರೀತಿಯ ವ್ಯವಸ್ಥೆ ನಿರ್ಮಿಸುವ ಪ್ರಭೃತಿಗಳಾಗಬಹುದು ಎಂದು. ಈಗ ದೊಡ್ಡ ದೊಡ್ಡ ಕಂಪನಿ ಕಟ್ಟಿರುವ ಎಷ್ಟೋ ಮಂದಿ ಒಂದು ಕಾಲದಲ್ಲಿ ಓದು ಬಿಟ್ಟು ತಮ್ಮ ಹುಚ್ಚು ಕನಸಿನ ಬೆನ್ನು ಹತ್ತಿದವರೆ. ನಮ್ಮಲ್ಲೂ ಆ ಪರಿಸರವಿದ್ದರೆ ಅಂತಹ ಸಾಹಸಗಳು ತಾನಾಗೆ ಅರಳುತ್ತವೆ ಅನಿಸಿದರು ಅದಕ್ಕೆ ಸಿದ್ದವಿರುವ ಪಕ್ವ ಮನಸ್ಥಿತಿ ಪೋಷಕರಾದ ನಮಗೇ ಇನ್ನು ಇಲ್ಲವೆನಿಸಿತು. ಕನಿಷ್ಠ ಆ ಕುರಿತು ಯೋಚಿಸುವುದು ಆ ದಿಸೆಯಲ್ಲಿಡಬಹುದಾದ ಮೊದಲ ಹೆಜ್ಜೆಯೆನಿಸಿದಾಗ ಮೂಡಿದ ಭಾವಕ್ಕೆ ಕೊಟ್ಟ ಪದಗಳ ರೂಪ ಈ ಕೆಳಗಿನ ಪದ್ಯ. ಅದು ಭವಿತದ ವಾಸ್ತವದಲ್ಲಿಯಾದರೂ ಸಾಕಾರವಾಗಲಿ ಎನ್ನುವುದು ಆಶಯ.

ನನ್ನ ಮಗ
__________

ಪಾಸಾಗಲಿ ನೀ ನನಗೆ ಮಗನೆ
ಫೇಲಾಗಲಿ ನೀ ನನ್ನ ಮಗನೆ
ಫೇಲುಗಳೆ ಪಾಸಿನ ಜೋಳಿಗೆ
ಹೆದರದೆ ನಡೆ – ಮಗನೆ ನೀ ನನಗೆ ||

ದರ್ಜೆ ಶ್ರೇಣಿ ಉನ್ನತಾಂಕ
ಮೂರನೆ ದರ್ಜೆ ಶೂನ್ಯಾಂಕ
ಸುಲಭವಲ್ಲ ಎರಡೂ ಸಾಧನೆ
ನೀನರಿತರೆ ಸರಿ ಬದುಕೆ ಶೋಧನೆ ||

ನೂರಕೆ ನೂರು ಬರೆದರು ಸರಿ
ಅರೆಬರೆ ಹೆಣಗಾಡಿದರು ಜಾರಿ
ಸೋಲು ಗೆಲುವು ಯುದ್ಧದ ನಿಯಮ
ಆ ಪ್ರಜ್ಞೆಯುದಿಸೆ ಮಿಕ್ಕೆಲ್ಲಾ ಕೊರಮ ||

ಬರಲಿ ಬಿಡಲಿ ಬಹುಮಾನ
ಪಾರಿತೋಷಕಗಳ ಸಮ್ಮಾನ
ಹಿಗ್ಗದೆ ಕುಗ್ಗದೆ ಬದುಕೆ ಕಲಿತರೆ
ಮಗನೆಂಬ ಹೆಮ್ಮೆ ಸಾಕೆನಗೆ ದೊರೆ ||

ಯಶಾಪಯಶ ಪರೀಕ್ಷೆಯ ಸಂತೆ
ಮಾಡಬೇಡ ಭವಿತ ಕೆಲಸದ ಚಿಂತೆ
ಯಾರು ಕೊಡದಿದ್ದರೇನು ಉದ್ಯೋಗ
ನೀನೆ ತುಂಬಿಬಿಡು ಉದ್ಯಮಿಯ ಜಾಗ || 

 
– ನಾಗೇಶ ಮೈಸೂರು, 

00000. ಮನದಿಂಗಿತಗಳ ಸ್ವಗತ – ಪರಿವಿಡಿ ಮತ್ತು ಇತರೆ ವಿವರ


______________________________________________________________________________

00000. ಮನದಿಂಗಿತಗಳ ಸ್ವಗತ – ಪರಿವಿಡಿ ಮತ್ತು ಇತರೆ ವಿವರ
______________________________________________________________________________

00140. ಶುಮಾಕರನೆಂಬ ವೇಗದ ವಿಪರ್ಯಾಸ (ಕಿರು ಬರಹ + ಕವನ)

00138. ಎರಡು ದೋಣಿಯ ಮೇಲೆ ಕಾಲಿಟ್ಟ ಬದುಕು…(ಅನುಭವ + ಕಿರು ಪ್ರಬಂಧ)

00139. ಕಾಲದ ಗಡಿಯಾರ . (ಕಿರು ಬರಹ + ಕವನ)

00137. ಮಳೆಯಾಗವ್ಳೆ ಚೌಡಿ.. (ಕಿರು ಬರಹ + ಕವನ)

00136. ಹೋಗ್ಲಿ ಬಿಡಿ, ಹಾಳಾಗ್ಲಿ ಬಿಡ್ರಿ..(ಹೊಸದ ತಂದು ಹಳತ ಮರೆತುಬಿಡಿ..)

00135. ಸುದ್ದಿ ಮುಟ್ಟಿ ಮನ ಸೂತಕ…(ಕಳಚಿದ ಕೊಂಡಿ) (ಕಿರು ಬರಹ + ಕವನ)

00134. ದೇವರು ನಮಗೆ ಹಾಕಿದ ಟೋಪಿ (ಮಕ್ಕಳ ಪದ್ಯ) (ಕಿರು ಬರಹ + ಕವನ)

00133. ಚಿತ್ರಗುಪ್ತನಿಗೊಂದು ಸಲಹೆ (ಸರಿ ತಪ್ಪುಗಳ ಲೆಕ್ಕ) (ಕಿರು ಬರಹ + ಕವನ)

00132. ಅಂಗಜನ ಅಂಗದ ಸದ್ದು … (ಕಿರು ಬರಹ + ಕವನ)

00131. ಮಳೆಯಾಗುತ ಸಾಂಗತ್ಯ…. (ಕಿರು ಬರಹ + ಕವನ).

00130. ರಾಜರತ್ನಂ ನೆನಪಿಗೆ (ಕಿರು ಬರಹ + ಕವನ)

00129. ಪುಸ್ತಕ ವಿಮರ್ಶೆ: ಕಣ್ಣೀರಜ್ಜ ಮತ್ತು ಇತರ ಕಥೆಗಳು (ಪುಸ್ತಕ ವಿಮರ್ಶೆ)

00128. “ಬೀರ” ದೇವರು ಒಳಗಿಳಿದರೆ ಶುರು! (ಕಿರು ಬರಹ + ಕವನ)

00127. ಮುರಿದು ಬಿದ್ದ ಪಿಎಸ್ಪಿ (ಬರಹ + ಕವನ)

00126. ನೂರು ಶತಕಗಳ ಸರದಾರ (ಕಿರು ಬರಹ + ಕವನ)

00125. ಶ್ರೀ ಸತ್ಯನಾರಾಯಣ ವ್ರತದಿ ಪೂಜಾಂಗವಾಗಿಹ ಕಥನ (ಸರಳ ಕಾವ್ಯರೂಪದಲ್ಲಿ)

00124. ಈ ಕೆಮ್ಮೊಣಕೆಮ್ಮು… (ಕಿರು ಬರಹ + ಕವನ)

00123. ತುಳಸಿಗಿಂದು ಸಂಭ್ರಮ (ಕಿರು ಬರಹ + ಕವನ)

00122. ಈ ಸಂಪದ (ಕಿರು ಬರಹ + ಕವನ)

00121. ಮಂಗಳಗ್ರಹಕ್ಕೊಂದು ಗ್ರಹಕೊಂದು ಕಲ್ಲು (ಕಿರು ಬರಹ + ಕವನ)

00120. ಹುಡುಗಾಟ ಆಡಿದ್ರೆ, ಪಟಾಕಿ ಸುಮ್ನೆ ಬಿಡುತ್ತ? (ಕಿರು ಬರಹ + ಕವನ) (04.11.2013)

00119. ದೀಪೋತ್ಸಾಹಂ ಭುವಂಗತೆ.. (ಬರಹ + 2 ಕವನ) (02.11.2013)

00118. ರಾಜ್ಯೋತ್ಸವದ ಮನವಿ : ಪದಗಳಿಗಾಗುತ ದನಿ (ಕವನ + ಕಿರು ಬರಹ) (01.11.2013)

00117. ಗುಜರಾತಿನ ಮೋಡಿ, ಪಟೇಲರ ಹಾಡಿ (ಕವನ + ಕಿರು ಬರಹ)

00116. ‘ಐ’ಗಳ ಪುರಾಣ – 03 …’ಐ’-ಪೋನು, ಪಾಡು, ಪ್ಯಾಡುಗಳ ಪಾಡಿನ ಹರಟೆ, (ಪ್ರಬಂಧ + ಲೇಖನ + ಕಥನ + ಹರಟೆ + ಅನುಭವ)

00115. ಮಂಡೋದರಿ, ನಿನಗ್ಯಾಕಿ ಪರಿ ಕಿರಿಕಿರಿ..? (ಕವನ + ಬರಹ) (WIP)

00114. 00114. ಸಮಾನಾಂತರ ಚಿಂತನಾ ಚಿತ್ತ (ಕವನ + ಕಿರು ಬರಹ)

00113. ಹಾಸ್ಯದಲೆ ಕೊಲ್ಲೆ ಪೂರ್ತಿ, ಸಿದ್ದಹಸ್ತ ನರಸಿಂಹಮೂರ್ತಿ (ಕವನ + ಕಿರು ಬರಹ)

00112. ಪೌರ್ಣಿಮೆ ಚಂದ್ರನ ಕಾಲೆಳೆಯುತ್ತ….(ಕವನ + ಕಿರು ಬರಹ)

00111. ಖೈರುದ್ದೀನನಿಗೆ ಹಬ್ಬದ ಶುಭಾಶಯ ಹೇಳಿ…(ಕವನ + ಕಿರು ಬರಹ)

00110. ಸಿಂಗಪುರ್ ಈಸ್ ಏ ಫೈನ್ ಸಿಟಿ…(ಕವನ + ಕಿರು ಬರಹ)

00109. ಆಯುಧ ಪೂಜೆ, ವಿಜಯದಶಮಿ (2) (ಕವನ + ಕಿರು ಬರಹ)

00108. ಮಹಾಲಯ ಅಮಾವಾಸೆ (ಮಹಾನವಮಿ) (01) (ಕವನ + ಕಿರು ಬರಹ)

00107. ಪಾತ್ರಗಳೆ ರಾಯರಿಗೆ ಸಲ್ಲಿಸಿವೆ ವಂದನ ! (ಕವನ + ಕಿರು ಬರಹ)

00106. …..ನಿನ್ನ ನೆನಸುತ್ತೇನೆ ! (ಕವನ + ಕಿರು ಬರಹ)

00105. ಯಾರದು ಮುಂದಿನ ಪಾಳಿ? (ಕವನ + ಕಿರು ಬರಹ)

00104. ಕೂರ್ಮಾವತಾರ : ಸಾಮಾನ್ಯ ಪ್ರೇಕ್ಷಕನೊಬ್ಬನ ಅನುಭವ, ವಿಮರ್ಶೆಯ ಒಳನೋಟ (ಅನುಭವ + ವಿಮರ್ಶೆ + ಬರಹ)

00103. ಯಾರ ಗೆಲುವು – ‘ಛಿಧ್ರವೋ, ಸಮಗ್ರವೋ? (ಕವನ + ಕಿರು ಬರಹ)

00102. ಪಂಚ್ಲೈನ್ ‘ಪಂಚೆ’ ಸಿದ್ರಾಮಣ್ಣ.. (ಕವನ + ಕಿರು ಬರಹ)

00101. ಯಾರು..? (ಚಿಣ್ಣರ ಹಾಡು) (ಕವನ + ಕಿರು ಬರಹ)

00100. ನಮ್ಮ ಬಾಲ್ಯದ ‘ಶರ್ಲಾಕ್ ಹೋಂ’ “ಎನ್. ನರಸಿಂಹಯ್ಯ” ನೆನಪಲಿ ..(ಕವನ + ಕಿರು ಬರಹ)

00099. ಕೆಂಪೇಗೌಡರೆ ಬನ್ನಿ ಹೀಗೆ ……(ಕವನ + ಕಿರು ಬರಹ)

00098. “ಮುದ್ದಣ್ಣ ಮನೋರಮೆ ಕಲಿತ ಚೀನಿ ಭಾಷೆ – 02” (ಭಾಗ – 02) (ಹಾಸ್ಯಬರಹ + ಹರಟೆ + ವ್ಯಂಗ್ಯ)

00097. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 04” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00096. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 03” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00095. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 02” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00094. ‘ಐ’ಗಳ ಪುರಾಣ – 02 …’ಐ’-ಪೋನು, ಪಾಡು, ಪ್ಯಾಡುಗಳ ಪಾಡಿನ ಹರಟೆ, (ಪ್ರಬಂಧ + ಲೇಖನ + ಕಥನ + ಹರಟೆ + ಅನುಭವ)

00093. ಅಲ್ಲಿರೋದು ನಮ್ಮನೆ, ಇಲ್ಲಿರೋದು ಸುಮ್ಮನೆ…(ಕವನ + ಕಿರು ಬರಹ)

00092. ಗಜಾನನ ಗಜ-ಮೂಷಿಕಾಸುರ ಕಥೆ (ಕವನ + ಕಿರು ಬರಹ)

00091. ಹುಟ್ಟುಹಬ್ಬದ ನಮಸ್ತೆ..(ಪೂಚಂತೆ ಯಾರಂತೆ?) (ಕವನ + ಕಿರು ಬರಹ)

00090. ಅವರಿತ್ತ ಜೀವನ ಭಿಕ್ಷೆ (ಕವನ + ಕಿರು ಬರಹ)

00089. ಶ್ರಾವಣ (ಕವನ + ಕಿರು ಬರಹ)

00088. ಮಿನುಗುತಾರೆ, ಗುನುಗುತ್ತಾರೆ… (ಕವನ + ಕಿರು ಬರಹ)

00087. ಡಾಲರ ರೂಪಾಯಿ ಲೆಕ್ಕಾಚಾರ (ಕವನ + ಕಿರು ಬರಹ)

00086. ಗೋಕುಲದಲಿ ಅಷ್ಟಮಿ , ಗೋಕುಲಾಷ್ಟಮಿ.. (ಕವನ + ಕಿರು ಬರಹ)

00085. ಜಲಚಕ್ರ (ಕವನ + ಕಿರು ಬರಹ)

00084. ವರಮಹಾಲಕ್ಷ್ಮಿ ವ್ರತ (ಕವನ + ಕಿರು ಬರಹ)

00083. ಅಷ್ಟಲಕ್ಷ್ಮಿಯರ ವರ (ಕವನ + ಕಿರು ಬರಹ)

00082. ಭಾರತಿಮನ, ಭಾರತಿತನ! (ಕವನ)

00081. ಮತ್ತೊಂದು ಸ್ವಾತಂತ್ರದ ದಿನ…. (ಕವನ + ಕಿರು ಬರಹ)

00080. ನಿಯತಿಯ ಶಿರ (ಕವನ)

00079. ಬದಲಾಗಬೇಕಾಗಿದ್ದು ನಾವು-ನೀವಾ ಅಥವಾ ಈ ವ್ಯವಸ್ಥೆಯಾ? (ಚಿಂತನೆ + ಲೇಖನ + ವಾಸ್ತವ )

00078. ಕಟ್ಟುವ ಬನ್ನಿ ಕನ್ನಡ ಉಳಿಸಿ ಬೆಳೆಸುವ ಪೀಳಿಗೆ (ಚಿಂತನೆ + ಅಂಕಣ: ಚಿಂತಕರ ಚಾವಡಿ (ಕನ್ನಡ ಸಂಘ)+ ಲೇಖನ + ಸಿಂಚನ)

00077. ಮೋಡ ಚುಂಬನ..ಗಾಢಾಲಿಂಗನ.. (ಕವನ + ಕಿರು ಬರಹ)

00076. ಎರಡು ಆಷಾಡ ಗೀತೆಗಳು (ಕವನ + ಕಿರು ಬರಹ)

00075. ಪುಟ್ಟನ ಅಳಲು .. (ಕವನ + ಕಿರು ಬರಹ)

00074. ಕಲಿಯಲು ಎಲ್ಲಿದೆ ಬಿಡುವು? (ಕವನ + ಕಿರು ಬರಹ)

00073. ದೆವ್ವ ಭೂತದ ಭೀತಿ! (ಕವನ)

00072. ಆಧ್ಯಾತ್ಮಿಕ ಕರ ಬಾಡಿಗೆ ತರ..! (ಕವನ + ಕಿರು ಬರಹ)

00071. ಅಸಂಗತ..! (ಕವನ + ಕಿರು ಬರಹ)

00070. ಹೆಣ್ಮನದ ಹವಾಗುಣ….! (ಕವನ + ಕಿರು ಬರಹ)

00069. ಬಿಟ್ಟುಬಿಡಿ ಸಿಗರೇಟು…! (ಬಿಟ್ಟು ಬೀಡಿ ಸಿಗರೇಟು..) (ಕವನ + ವಾಸ್ತವ)

00068. ಚಿಲ್ಲರೆ ಅಂಗಡಿ ಕಾಕ , ರೀಟೇಲಲಿ ಅಕ್ಕಿ..! ( ಕವನ + ವಾಸ್ತವ)

00067. ಧೂಮಸ್ನಾನ….! (ಕವನ + ವಾಸ್ತವ)

00066. ಧೂಮ-ಸಾಹಿತ್ಯ…! (ಕವನ + ವಾಸ್ತವ)

00065. ಸರಿ ತಪ್ಪುಗಳ ಲೆಕ್ಕ (ಚಿತ್ರಗುಪ್ತ ವಾಗ್ವಾದ – ಪೂರ್ವಾರ್ಧ: ಲಘು ಹಾಸ್ಯದ ಧಾಟಿ) (ಕವನ + ಕಿರು ಬರಹ)

00064. ಗಂಗಾವತಾರಣ (ಗಂಗಾ + ಅವತಾರ + ರಣ) (ಕವನ + ಬರಹ + ವಾಸ್ತವ + ಪೌರಾಣಿಕ)

00063. ಗಂಗಾವತರಣ…! (ಕವನ + ಕಿರು ಬರಹ)

00062. ಪಾಂಚಾಲಿಯ ಹಾಡು (ಕವನ + ಕಿರು ಬರಹ)

00061. ಈ ಅಪ್ಪಗಳು (ಕವನ + ಕಿರು ಬರಹ)

00060. ಸಾವೆಂಬ ಸಕಲೇಶಪುರದಲ್ಲಿ….!

00059. ನಿರಂತರ ಕುಣಿತ! (ಕವನ)

00058. ಗುಂಪಿನೊಳಗವಿತಿದೆಯೆ ವರ್ಣ? (ಕವನ + ಕಿರು ಬರಹ)

00057. ಈ ದಿನ ತನು ಮನ ಭಾವ….! (ಕವನ)

00056. ಹಿತ್ತಲ ಗಿಡದ ಮದ್ದು (ಕವನ + ಕಿರು ಬರಹ)

00055. ಏಕಾಂತದ ಏಕಾಂತ…! (ಕವನ + ಕಿರು ಬರಹ)

00054. ಈ ಅಮ್ಮಗಳು (ಕವನ + ಕಿರು ಬರಹ)

00053. ಚುನಾವಣಾ ಫಲಿತಾಂಶ ! (ಕವನ)

00052. ಸೃಷ್ಟಿ ರಹಸ್ಯ..! (ಈ ಅಂಡ ಪಿಂಡ ಬ್ರಹ್ಮಾಂಡದ ಸಶೇಷ ಭಾಗ) (ಕವನ + ಕಿರು ಬರಹ)

00051. ಈ ಅಂಡ ಪಿಂಡ ಬ್ರಹ್ಮಾಂಡ …(ಕವನ + ಕಿರು ಬರಹ)

00050. ಈ ಏಪ್ರಿಲ್ಲಿಗೇಕೊ ಮುನಿಸು…(ಕವನ + ಕಿರು ಬರಹ)

00049. ಯುಗಾದಿಯಾಗಲಿ ಜಾಗತಿಕ…! (ಕವನ)

00048. ಒತ್ತಡಗಳ ಬೆತ್ತ ! (ಕವನ)

00047. ಸುಖಕಿರುವ ಅವಸರ….! (ಕವನ)

00046. ತ್ಸುನಾಮಿ ಹೊತ್ತಲಿ…(ಕವನ)

00045. ಗುಬ್ಬಣ್ಣನ ಸ್ವಗತಗಳು (ಚುಟುಕಗಳು)

00044. ಮುಗಿದರೆ ಇಹ ವ್ಯಾಪಾರ…..(ಕವನ)

00043. ಮಾತಿಗೊಬ್ಬರ ….(ಕವನ)

00042. ವಚನದಲ್ಲಿ ನಾಮಾಮೃತ ತುಂಬಿದ ವಚನಾಂಜಲಿ ಕಾರ್ಯಕ್ರಮ (ವರದಿ) (ಕನ್ನಡ ಸಂಘ + ವರದಿ + ಲೇಖನ)

00041. ‘ಕನ್ನಡ ಪ್ರಭ’ದ ಕಬ್ಬಿಗ ತೋಟದಲ್ಲರಳಿದ ಡಬ್ಲ್ಯು. ಬಿ. ಏಟ್ಸನ ಕವನ : ನನ್ನ ಮೊದಲ ಅನುವಾದದ ಯತ್ನ..(ಕವನ + ಬರಹ)

00040. ಆಗ್ನೇಯೇಷ್ಯಾದ ಹಣ್ಣಿನ ರಾಣಿ – ‘ಮಾಂಗಸ್ಟೀನ್’! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00039. “ಮುದ್ದಣ್ಣ ಮನೋರಮೆ ಕಲಿತ ಚೀನಿ ಭಾಷೆ – 01!” (ಹಾಸ್ಯಬರಹ + ಹರಟೆ + ವ್ಯಂಗ್ಯ)

00038 – ಹೊಸ (ಹಳೆ) ರುಚಿ: “ಹಸಿ-ಹುಳಿ” (ಹೊಸ ರುಚಿ + ಲಘು ಹಾಸ್ಯ)

00037 – ರುಚಿಗೆ ರಾಜಾ, ವಾಸನೆಯೆ ಗಾರ್ಬೇಜಾ! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00036 – ಈ ಕೆಂಪಮ್ಮನ ಹೆಸರೆ ಡ್ರಾಗನ್ ಫ್ರೂಟು, ನೋಡಲೆ ಸೊಗಸು ಅವಳಾಕಿದ ಸೂಟು! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00035 – ಜುಟ್ಟಿನ ಬಟ್ಟೆ ಹೊದ್ದ ‘ಕೇಶೀರಾಜ’, ಮುತ್ತಿನ ಬಣ್ಣದ ‘ರಂಬೂತಾನ್’ ಹಣ್ಣೆ ಖನಿಜ! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00034 – ವಿಷಾಪಹಾರಿ ‘ಡ್ರಾಗನ್ನಿನ ಕಣ್ಣು’, ಈ ರುಜಾಪಹಾರಿ ‘ಲೊಂಗನ್’ ಹಣ್ಣು! (ಹಣ್ಣುಗಳ ಪರಿಚಯ + ಲಘು ಹಾಸ್ಯ)

033A – ಸಿಂಗಾಪುರದ “ಹಾವ್ ಪಾರ ವಿಲ್ಲಾ” ದೃಶ್ಯ ಕಲಾ ತೋಟ! (photos) (ಪ್ರವಾಸಿ ತಾಣ ಪರಿಚಯ + ಪ್ರವಾಸ ಅನುಭವ)

033 – ಸಿಂಗಪುರದಲ್ಲಿನ ಚೀಣಿ ದೃಶ್ಯ ಕಾವ್ಯ “ಹಾವ್ ಪಾರ್ ವಿಲ್ಲಾ” ( ಪ್ರವಾಸಿ ತಾಣ ಪರಿಚಯ + ಪ್ರವಾಸ ಅನುಭವ + ಲಘು ಹಾಸ್ಯ)

00032 – ಸಂಪತ್ತಿನ ಬೀಜ, ಸಸಿ ಮತ್ತು ವೃಕ್ಷಗಳ ನೀತಿ ಭೋಧಕ ಕಥೆ (ಆಧುನಿಕ ಪುರಾಣ ಕಥಾ ಕಾಲಕ್ಷೇಪ)! (ಆಧುನಿಕ ನೀತಿ ಭೋಧೆ + ವಿಡಂಬನೆ + ವ್ಯಂಗ್ಯ)

00031 – ಅಪೂರ್ವ ಕವನದ ಕುರಿತು ಹಿರಿಯ ಕವಿಯೊಬ್ಬರ ಮಾತು (ಲೇಖನ + ಬರಹ + ಪ್ರಬಂಧ + ಕವನ + ವ್ಯಕ್ತಿತ್ವ )

00030 – ಪುಸ್ತಕ ವಿಮರ್ಶೆ: ಮಾವೋನ ಕೊನೆಯ ನರ್ತಕ (ಪುಸ್ತಕ ವಿಮರ್ಶೆ)

00029. ಇರುವೆ ಮತ್ತು ಒಂದು ತುಂಡು ರೊಟ್ಟಿಯ ಕಥೆ! (ಆಧುನಿಕ ನೀತಿ ಭೋಧೆ + ವಿಡಂಬನೆ + ವ್ಯಂಗ್ಯ)

00028. ಸಿಂಗನ್ನಡಿಗರಿಂದ ಸಿಂಗನ್ನಡಿಗರಿಗಾಗಿ! – ಸಿಂಗಾರ ಉತ್ಸವ 2013 (ಕನ್ನಡ ಸಂಘ + ವರದಿ + ಲೇಖನ )

00027. ಗುಬ್ಬಣ್ಣನ ಯೂನಿವೆರ್ಸಲ್ ಸ್ಟುಡಿಯೊ ದಂಡಯಾತ್ರೆ ! (ಭಾಗ – 02) (ಹಾಸ್ಯಬರಹ + ಹರಟೆ)

00026. ಗುಬ್ಬಣ್ಣನ ಯೂನಿವೆರ್ಸಲ್ ಸ್ಟುಡಿಯೊ ದಂಡಯಾತ್ರೆ ! (ಭಾಗ – 01) (ಹಾಸ್ಯಬರಹ + ಹರಟೆ)

00025. ಸರಿಯಪ್ಪಾ ಸಾಕು ಬಿಡು ಕಲಿಸಿದ್ದು ಸುಗ್ಗಿ, ಉರು ಹೊಡೆದೇ ಕಲಿವೆ ನಾ ಕನ್ನಡದ ಮಗ್ಗಿ! ( ಲಘು ಹಾಸ್ಯ + ಕಥನ + ಅನುಭವ)

00024. ಜತೆ ನೀ ಕಾಡಿಗೆ , ಹೋಗಲಿಲ್ಲವೇಕೆ ಊರ್ಮಿಳೆ? (ಬರಹ + ಕಾವ್ಯಬರಹ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00023. ಶೂರ್ಪನಖಿ, ಆಹಾ! ಎಂಥಾ ಸುಖಿ! (ಬರಹ + ಕಾವ್ಯಬರಹ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00022. ದುರಂತ ನಾಯಕಿ ಸೀತೆಯ ಬದುಕು………! (ಬರಹ + ಕಾವ್ಯಬರಹ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00021. ಶ್ರೀ ರಾಮನಿಗೇನಿತ್ತನಿವಾರ್ಯ….? (ಬರಹ + ಕವನ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00020. ಈ ದಿನ ಜನುಮದಿನಾ…..! (ಬರಹ + ಕವನ + ನೆನಪು + ಭಾವನೆ)

00019. ‘ಐ’ಗಳ ಪುರಾಣ – 01….’ಐ’-ಪೋನು, ಪಾಡು, ಪ್ಯಾಡುಗಳ ಪಾಡಿನ ಹರಟೆ, (ಪ್ರಬಂಧ + ಲೇಖನ + ಕಥನ + ಹರಟೆ + ಅನುಭವ)

00018. ಸಿಂಗಪೂರ ಸುತ್ತಾಟ, ಊಟ – ಸಿಕ್ಕಿತ ಕನಿಷ್ಟ ರೋಟಿ, ಪರಾಟ..? (ಪ್ರವಾಸದ ಅನುಭವ + ಕವನ + ಲಘು ಹಾಸ್ಯ )

00017. ಹುಡುಕೂ, ವರ್ಷದ್ಹುಡುಕು ..! (ಹಬ್ಬ + ಹರಿದಿನ + ಸಂಪ್ರದಾಯ + ಬರಹ + ಲೇಖನ)

00016. ಅಂತರಂಗದಂತಃಪುರದ ಕದಪದ ಮನದನ್ನೆಯರು…! (ಬರಹ + ಕವನ + ಅನುಭವ + ಆಡಳಿತಾತ್ಮಕ + ಲಘು ಹಾಸ್ಯ)

00015 – ತರ ತರ ಋತು ಸಂವತ್ಸರ……ಹಳತೊಸತು ಮೇಳೈಸಿತೊ ಬೆರೆತು! (ಹಬ್ಬ + ಹರಿದಿನ + ಸಂಪ್ರದಾಯ + ಬರಹ + ಕವನ)

00014 – ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ….! (ನೀಳ್ಗಾವ್ಯ + ಕಾವ್ಯ + ಪೌರಾಣಿಕ)

00013 – ಹಾರುತ ದೂರಾದೂರ…..! (ಅನುಭವ + ಪ್ರಬಂಧ + ಹಾಸ್ಯಲೇಖನ + ಲಘು ಹಾಸ್ಯ)

00012. ಹೆಚ್ಚು ಬೆಲೆಯೆಂದರೆ ಶ್ರೇಷ್ಟ ಗುಣಮಟ್ಟವಿರಬೇಕೆಂದೇನಿಲ್ಲ, ಗೊತ್ತಾ! (ಆಡಳಿತಾತ್ಮಕ + ಮ್ಯಾನೇಜ್ಮೆಂಟು + ವ್ಯವಸ್ಥೆ + ವಾಸ್ತವ)

00011. ಲಘು ಪ್ರಬಂಧ: ನನ್ನ ಪ್ರಧಾನ ಸಂಪಾದಕ ಹುದ್ದೆ…! (ಅನುಭವ + ಪ್ರಬಂಧ + ಹಾಸ್ಯಲೇಖನ + ಲಘು ಹಾಸ್ಯ)

00010. ವಿಮರ್ಶೆ : ಕವನ ಸಂಕಲನ: “ಅಂತರ ಹಾಗು ಇತರ ಕವನಗಳು” ಕವಿ: ವಸಂತ ಕುಲಕರ್ಣಿ

00009. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 01” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00008. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(03) (ಬರಹ + ವಿಡಂಬನೆ + ಲೇಖನ)

00007. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(02) (ಬರಹ + ವಿಡಂಬನೆ + ಲೇಖನ)

00006. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(01) (ಬರಹ + ವಿಡಂಬನೆ + ಲೇಖನ)

00005. ಮೆಲ್ಲುಸಿರೆ ಸವಿಗಾನ….! (ಬರಹ + ಭಾವನೆ + ವಿಮರ್ಶೆ)

00004. ಗಮನೇಶ್ವರಿಯ ಗಮಕ, ವಯಸ್ಸಿನಾ ಮಯಕ…! (ಬರಹ + ಅನುಭವ)

00003. ನೀನೋದಿದ ವಿದ್ಯೆಗೆಲ್ಲಿಡುವೆ ನೈವೇದ್ಯ? (ಲೇಖನ)

00002. ಏನಾಗಿದೀದಿನಗಳಿಗೆ? (ಲೇಖನ)

00001. ಮೊದಲ ಬ್ಲಾಗ್ – ಮನದಿಂಗಿತಗಳ ಸ್ವಗತ! (ಬರಹ + ಕವನ)